ಗುರುವಾರ, 14 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ
Published 15 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕರ್ತವ್ಯದಂತಿರುವ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿ ಸುವುದರಿಂದ ಧರ್ಮ ಕಾರ್ಯದಲ್ಲಿ ಆಸಕ್ತಿ ಮೂಡುವುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನ.
ವೃಷಭ
ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದ್ದು, ಅವರಿಂದ ಸಿಗುವ ಸಲಹೆ, ಸಹಕಾರ ಮರೆಯಲಾಗದಂತೆ ಇರುವುದು. ವೃತ್ತಿಪರ ಕಾರ್ಯದಲ್ಲಿ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಿ.
ಮಿಥುನ
ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ಆಲೋಚನೆಗಳು ದಾರಿತಪ್ಪಿಸಲಿವೆ. ರಾಜಕೀಯ ವ್ಯಕ್ತಿಗಳು  ಪರಿಸ್ಥಿತಿಯ ಲಾಭ ಪಡೆದುಕೊಳ್ಳುವರು.
ಕರ್ಕಾಟಕ
ಭೂ ಸಂಬಂಧದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಯಮಿತ ಕೆಲಸಕ್ಕೆ ಸೂಕ್ತ ಪ್ರಶಂಸೆ ಸಿಗಲಿದೆ.  ಆರೋಗ್ಯದ ಕಡೆಗೆ ಗಮನವಿರಲಿ.
ಸಿಂಹ
ವಿಶೇಷ ವ್ಯಕ್ತಿಗಳ ಭೇಟಿ  ಸಂತೋಷ ತರುವುದಲ್ಲದೆ, ನಿಮ್ಮ ಹೊಸ ಯೋಜನೆಗಳಿಗೆ ಚೈತನ್ಯ ತುಂಬುವುದು. ಕಾರ್ಯಸಾಧಕರ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
ಕನ್ಯಾ
ನವದಂಪತಿ‌ಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ. ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ  ಸಂಧಾನದ ಅಥವಾ ಷರತ್ತುಗಳ ಮೂಲಕ ಬಗೆಹರಿಸಿಕೊಳ್ಳಿ.
ತುಲಾ
ಅಹಂಕಾರಭಾವದ ನಡವಳಿಕೆಯಿಂದ ಸೋಲು ಸಂಭವಿಸುವುದು. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿನ ಚಿಂತೆ ತಪ್ಪಿದ್ದಲ್ಲ. ಆಡಳಿತ ವರ್ಗದವರಿಗೆ ಸಿಬ್ಬಂದಿಗಳಿಂದ ಪ್ರಶಂಸೆ ದೊರೆಯುತ್ತದೆ.
ವೃಶ್ಚಿಕ
ವೈಯಕ್ತಿಕ ವಿಚಾರಗಳಲ್ಲಿ ಸೃಷ್ಟಿಯಾದ ಸಣ್ಣ ಪುಟ್ಟ ಬದಲಾವಣೆಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ವಸ್ತ್ರ ವಿನ್ಯಾಸಗಾರರಿಗೆ ವಿಶೇಷ  ಪರಿಣತಿಯ ಅಗತ್ಯವಿದೆ. ಸಾಮಗ್ರಿ ಖರೀದಿಯಿಂದ ಖರ್ಚು ಬರಲಿದೆ.
ಧನು
ಗೃಹೋಪಕರಣ ಖರೀದಿ ಅಥವಾ ಕೆಲವಾರು ಯೋಜನೆಗಳಲ್ಲಿ ಎಡವಿದ ಅನುಭವ ಆಗಲಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹವಿರುತ್ತದೆ. ಇದರಿಂದ ವಿದ್ಯಾಪ್ರಗತಿಗೆ ತೊಂದರೆಯಾಗಬಹುದು.
ಮಕರ
ಇಂದಿನವರೆಗೂ ಲೌಕಿಕ ಜೀವನವನ್ನು ಯಾವುದೇ ಯೋಚನೆ ಇಲ್ಲದೆ ಮಾಡುತ್ತಿದ್ದ ನಿಮಗೆ ಇಂದಿನಿಂದ ಮುಕ್ತಿ ಹಾಗೂ ಅದಕ್ಕೆ ಸಂಬಂಧ ಪಟ್ಟಂತಹ ವಿಚಾರದಲ್ಲಿ ಆಸಕ್ತಿ ಬರಲಿದೆ. 
ಕುಂಭ
ಹಣಕಾಸಿನ ವ್ಯವಹಾರಗಳೆಲ್ಲ ಸುಗಮವಾಗಿ ಸಾಗುತ್ತಿರುವುದರಿಂದ ಮನಸ್ಸು ನಿರಾಳವಾಗಿರುವುದು. ಹೂಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯಬಹುದು. ಕೃಷಿಕರಿಗೆ ಕೆಲಸಗಳು ಪ್ರಾರಂಭವಾಗಲಿವೆ. 
ಮೀನ
 ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತ. ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹೊಸ ಹುರುಪು ಮೂಡಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು.
ADVERTISEMENT
ADVERTISEMENT