ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಬಾಳಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಘಟನೆ ನಡೆಯಲಿದೆ
Published 15 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಸುಮಧುರ ಘಟನೆ ಬಾಳಲ್ಲಿ ನಡೆಯಲಿದೆ. ವಿನೋದ ಸ್ವಭಾವ ಹಾಗೂ ಬುದ್ಧಿವಂತಿಕೆ ಇತರರನ್ನು ಆಕರ್ಷಿಸುವುದು.
ವೃಷಭ
ಒಂದೇ ವಿಷಯದಲ್ಲಿ ಹಲವರ ಸಲಹೆ ಕೇಳಿದರೆ, ಹಲವು ಗೊಂದಲಗಳು ಉಂಟಾಗಬಹುದು. ಸಂಜೆ ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇದೆ.
ಮಿಥುನ
ರಕ್ತ ಸಂಬಂಧ ಕಾಯಿಲೆ ಬಗ್ಗೆ ಅನುಮಾನ ಇರುವವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಅಂದುಕೊಂಡ ಕೆಲಸಗಳು ನಿರಾತಂಕವಾಗಿ ಸಾಗಲಿವೆ.
ಕರ್ಕಾಟಕ
ಸೇವಕ ವರ್ಗದವರಲ್ಲಿ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವುದರಿಂದ ಅನುಕೂಲ. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಹೆಚ್ಚಿನ ಸಂತಸವಿರುವುದು.
ಸಿಂಹ
ನಿವೃತ್ತಿಯ ಹಣದಲ್ಲಿ ಮಕ್ಕಳ ಹೆಸರಿಗೆ ಮನೆ ಕೊಳ್ಳುವ ಯೋಗವಿದೆ. ಮೇಲಧಿಕಾರಿಗಳಿಂದ ಕುತೂಹಲಕಾರಿ ವಿಷಯ ತಿಳಿದು ಅಚ್ಚರಿ ಗೊಳ್ಳುವಿರಿ. ಸುಖ ಭೋಜನ ಪ್ರಾಪ್ತಿ.
ಕನ್ಯಾ
ಸಂಬಂಧದಲ್ಲಿ ವ್ಯವಹಾರ ಮಾಡುವುದರಿಂದ ಮೋಸ ಉಂಟಾಗಬಹುದು. ಆಹಾರ ಪದಾರ್ಥದ ಉದ್ದಿಮೆದಾರರಿಗೆ ಹೊಸ ಯೋಜನೆ ಫಲ ಕೊಡಲಿದೆ. ಪಿತ್ರಾರ್ಜಿತ ಆಸ್ತಿ ಲಭ್ಯ.
ತುಲಾ
ವಿದೇಶ ವ್ಯವಹಾರದಿಂದ ಈ ದಿನ ಅಧಿಕ ಸಮಯವನ್ನು ವೃತ್ತಿ ಜೀವನಕ್ಕೆ ಮೀಸಲಿಡಬೇಕಾಗುತ್ತದೆ. ಸ್ನೇಹಿತರಿಂದ ಸಹಾಯ ಸಕಾಲದಲ್ಲಿ ದೊರೆಯಲಿದೆ.
ವೃಶ್ಚಿಕ
ರಾಜಕೀಯ ವ್ಯಕ್ತಿಗಳಿಗೆ ವಿರೋಧ ಪಕ್ಷದವರಿಂದ ತೊಂದರೆಗಳಾಗಬಹುದು. ಅನಿರೀಕ್ಷಿತ ದುರ್ಘಟನೆಗಳಿಗೆ ವಿಚಲಿತರಾಗದೆ ಸಂಯಮದಿಂದ ಕಾರ್ಯನಿರ್ವಹಿಸಿ. ಆರ್ಥಿಕ ಕಷ್ಟ ನಿವಾರಣೆಯಾಗಲಿದೆ.
ಧನು
ಆಸ್ತಿ ವಿಷಯಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಶುಭ ಸಮಾರಂಭಕ್ಕಾಗಿ ವಸ್ತ್ರಾಭರಣಗಳನ್ನು ಖರೀದಿಸುವ ಯೋಗವಿದೆ. ಆಧ್ಯಾತ್ಮಿಕ ಪುಸ್ತಕಗಳನ್ನು ಕೊಳ್ಳುವಿರಿ.
ಮಕರ
ದೀರ್ಘಕಾಲೀನ ಅನಾರೋಗ್ಯಗಳನ್ನು ಬಗೆಹರಿಸಿಕೊಳ್ಳುವಿರಿ. ನಂಬಿಕಸ್ಥರಿಂದ ವ್ಯಾಪಾರದಲ್ಲಿ ಮೋಸಹೋಗುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ.
ಕುಂಭ
ನಿವೇಶನದ ಅಥವಾ ಜಮೀನಿನ ಖರೀದಿ ವಿಷಯದಲ್ಲಿ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಪೌಷ್ಟಿಕಾಂಶ ಆಹಾರದ ಕೊರತೆ ಕಾಣುತ್ತದೆ.
ಮೀನ
ವೈಯುಕ್ತಿಕವಾಗಿ ಎಷ್ಟು ಹಣ ಗಳಿಸಬಹುದೆಂದು ಲೆಕ್ಕಾಚಾರ ಹಾಕುವುದಕ್ಕಿಂತ ಬಂಡವಾಳ ಕಾಯ್ದುಕೊಳ್ಳುವುದರತ್ತ ಗಮನ ಹರಿಸಿ. ಆತಿಥ್ಯಕ್ಕಾಗಿ ಖರ್ಚು ಮಾಡುವಲ್ಲಿ ಧಾರಾಳತನ ಮೆರೆಯುವಿರಿ.
ADVERTISEMENT
ADVERTISEMENT