ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
16/04/2023 - 22/04/2023
ವಾರ ಭವಿಷ್ಯ: 23-4-2023ರಿಂದ 29-4-2023 ರವರೆಗೆ
Published 22 ಏಪ್ರಿಲ್ 2023, 20:44 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ಹೊಸ ಯೋಜನೆಯನ್ನು ಆರಂಭಿಸುವುದಕ್ಕೆ ಮುನ್ನ ಹಳೆ ಯೋಜನೆಗಳನ್ನು ಪೂರ್ಣಗೊಳಿಸಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಖರ್ಚಿನಲ್ಲಿ ಮಿತಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅತಿಯಾದ ಆತ್ಮಾಭಿಮಾನ ಒಳ್ಳೆಯದಲ್ಲ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಉತ್ತಮವಾಗಿರುತ್ತದೆ. ತಾಯಿಯಿಂದ ಧನಸಹಾಯ ದೊರೆಯುತ್ತದೆ. ಬಂಧುಗಳೊಡನೆ ಸಂಬಂಧವನ್ನು ವೃದ್ಧಿಮಾಡಿಕೊಳ್ಳುವುದು ನಿಮಗೆ ಉತ್ತಮ. ಸಂಗಾತಿಗೆ ಯಾವುದಾದರೂ ಒಂದು ಸ್ಥಿರಾಸ್ತಿ ಒದಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆಯುತ್ತದೆ. ನರದೌರ್ಬಲ್ಯ ಇರುವವರು ಎಚ್ಚರವಹಿಸಿರಿ. ತಂದೆಯಿಂದ ಸೂಕ್ತ ಆಸ್ತಿ ದೊರಕುವ ಸಾಧ್ಯತೆ ಇದೆ.
ವೃಷಭ
ಆಸ್ತಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಮನೆಯವರೊಡನೆ ಚರ್ಚಿಸಿ ತೆಗೆದುಕೊಳ್ಳಿರಿ. ಕೆಲವರಿಗೆ ಜೀವನೋಪಾಯಕ್ಕೆ ಬದಲಿ ಆಶ್ರಯಗಳು ದೊರೆಯಬಹುದು. ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿ ಓದಲೇಬೇಕಾದ ಪರಿಸ್ಥಿತಿ ಇರುತ್ತದೆ. ನಿಮ್ಮಲ್ಲಿರುವ ಜ್ಞಾನಶಕ್ತಿಯು ಹೊರಬರುವ ಕಾಲ ಸಮೀಪದಲ್ಲಿದೆ. ನಿಮ್ಮ ಹಿರಿಯರ ಮಾತನ್ನು ಅನುಸರಿಸುವುದರಿಂದ ನಿಮಗೆ ಒಳಿತಾಗುವುದು. ಧನ ಆದಾಯವು ಮಂದಗತಿಯಲ್ಲಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಹಣಕಾಸಿನ ವ್ಯವಹಾರ ಮಾಡುವವರಿಗೆ ಲಾಭ ಕಡಿಮೆ. ನಿಮ್ಮ ಕೆಲವೊಂದು ಕೆಲಸಗಳಿಗೆ ಮನೆಯವರೆಲ್ಲರ ಬೆಂಬಲ ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಕೃಷಿಕರಿಗೆ ಧನ ಲಾಭವಿದೆ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಲಾಭವಿರುತ್ತದೆ. ಶೀತ ಬಾಧೆ ಇರುವವರು ಎಚ್ಚರವಹಿಸಿರಿ.
ಮಿಥುನ
ದಾಖಲಾತಿಗಳನ್ನು ನಿರ್ವಹಣೆ ಮಾಡುತ್ತಿರುವವರು ಹೆಚ್ಚು ಎಚ್ಚರವಹಿಸಿರಿ. ಅಮೂಲ್ಯ ದಾಖಲೆಗಳು ಕಳ್ಳತನ ಆಗಬಹುದು. ಕಚೇರಿಯಲ್ಲಿ ಬಹಳ ಚುರುಕಾಗಿ ಕೆಲಸ ಮಾಡುವಿರಿ. ಅನುಕೂಲಕ್ಕೆ ತಕ್ಕಂತೆ ಹೊಸ ಕೆಲಸಗಳು ದೊರೆಯುತ್ತವೆ. ಕುಟುಂಬದಲ್ಲಿನ ಹಿರಿಯರು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಸಮಾಜ ಸೇವೆಯನ್ನು ಮಾಡಲು ಸಾಕಷ್ಟು ಉತ್ಸುಕರಾಗಿರುವಿರಿ. ರಾಜಕೀಯ ಸೇರುವ ಆಸಕ್ತಿ ಇರುವವರು ಪ್ರಯತ್ನ ಪಡುವುದು ಬಹಳ ಒಳ್ಳೆಯದು. ಸರ್ಕಾರಿ ಅಧಿಕಾರಿಗಳೊಡನೆ ಉತ್ತಮ ಸಂಬಂಧ ಹೊಂದುವಿರಿ. ಹಣದ ಒಳಹರಿವು ಇದ್ದರೂ ಖರ್ಚು ಅಷ್ಟೇ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಪರಿಶ್ರಮದಿಂದ ಫಲಿತಾಂಶ ಪಡೆಯುವ ಯೋಗವಿದೆ. ಕ್ರೀಡಾಪಟುಗಳಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಕಡಿಮೆಯಾಗಬಹುದು.
ಕರ್ಕಾಟಕ
ರಾಜಕೀಯ ನಾಯಕರು ತಮ್ಮ ಆಶ್ವಾಸನೆಗಳಿಂದ ಜನರನ್ನು ಮರುಳು ಮಾಡಬಹುದು. ಅನಗತ್ಯವಾಗಿ ಜಗಳದ ನಡುವೆ ಮಧ್ಯಸ್ಥಿಕೆ ವಹಿಸಲು ಹೋಗಬೇಡಿರಿ. ಬರಹಗಾರರಿಗೆ ಸ್ವಲ್ಪ ಆದಾಯ ಹೆಚ್ಚುತ್ತದೆ. ಸಹ ಕಲಾವಿದರುಗಳಿಗೆ ಹೆಚ್ಚು ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ಕೆಲಸದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಒಳ ಗುಟ್ಟು ಎದುರಾಳಿಗೆ ತಿಳಿಯದಂತೆ ನಡೆಯಿರಿ. ವಂಶ ಪಾರಂಪರ್ಯದಿಂದ ಬಂದಿರುವ ವ್ಯವಹಾರ ಮಾಡುತ್ತಿರುವವರಿಗೆ ನಷ್ಟವಿರುವುದಿಲ್ಲ. ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಹೆಚ್ಚು ಮುನ್ನಡೆ ಇರುತ್ತದೆ. ಕೃಷಿಕರಿಗೆ ಆದಾಯ ಕಡಿಮೆಯಾಗಬಹುದು. ಹೊಸ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚುಗಳು ಮತ್ತು ತೊಂದರೆ ಎದುರಾಗುವ ಸಾಧ್ಯತೆ ಇದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ.
ಸಿಂಹ
ತಂದೆಯಿಂದ ಆಸ್ತಿ ಬರಬಹುದು. ಅವರ ವ್ಯವಹಾರ, ವ್ಯಾಪಾರಗಳಲ್ಲಿ ನಿಮಗೆ ಪಾಲು ದೊರೆಯುತ್ತದೆ. ಸಂಸಾರ ನಿರ್ವಹಣೆಗಾಗಿ ಹೆಚ್ಚು ಹಣ ವ್ಯಯ ಮಾಡುವಿರಿ. ಗೃಹ ಕೈಗಾರಿಕೆ ನಡೆಸುವವರಿಗೆ ಮನೆಯವರ ಸಹಕಾರ ಸಂಪೂರ್ಣ ದೊರೆಯುತ್ತದೆ. ಪ್ರೇಮಿಗಳು ತಮ್ಮ ಪ್ರೇಮದ ವಿಷಯವನ್ನು ಹಿರಿಯರಿಗೆ ತಿಳಿಸುವುದು ಬಹಳ ಒಳ್ಳೆಯದು. ಭೂ ವ್ಯವಹಾರವನ್ನು ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಕೃಷಿಕರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ವಲ್ಪ ಏರುಪೇರು ಆಗಬಹುದು. ವಿದೇಶಿ ಸಂಸ್ಥೆಗಳಿಗೆ ಕಚ್ಚಾ ಮಾಲನ್ನು ರಫ್ತು ಮಾಡುವ ಕಂಪನಿಗಳಿಗೆ ಒಳ್ಳೆಯ ವ್ಯವಹಾರವಿರುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ಕನ್ಯಾ
ಸಿವಿಲ್ ಕಂಟ್ರಾಕ್ಟರ್‌ಗಳಿಗೆ ಬಾಕಿ ಇದ್ದ ಹಣ ಈಗ ಸಿಗುತ್ತದೆ. ಚಿತ್ರ ಕಲಾವಿದರು ಕಲೆಯಿಂದ ಹಣ ಸಂಪಾದನೆ ಕೂಡ ಮಾಡಬಹುದು. ಧನ ಆದಾಯವು ಮಂದಗತಿಯಲ್ಲಿರುತ್ತದೆ. ವೃತ್ತಿಯಲ್ಲಿ ಹೊಸ ಶತ್ರುಗಳು ಬರಬಹುದು. ಹೊಸ ಸಾಲಗಳು ದೊರೆಯುತ್ತವೆ ಮತ್ತು ಹಳೆಯ ಸಾಲಗಳನ್ನು ತೀರಿಸಲು ಕಾಲಾವಕಾಶ ದೊರೆಯುತ್ತದೆ. ಸಂಗಾತಿ ಮಾಡುವ ದುಂದುವೆಚ್ಚ ಸ್ವಲ್ಪ ಗಾಬರಿ ಎನಿಸುತ್ತದೆ. ಸ್ತ್ರೀಯರಿಂದ ನಿಮಗೆ ಸಹಾಯ ಸಿಗುತ್ತದೆ. ಕೃಷಿಯನ್ನು ಅಧ್ಯಯನ ಮಾಡುತ್ತಿರುವವರಿಗೆ ಹೊಸ ರೀತಿಯ ಪ್ರೋತ್ಸಾಹ ಸಿಗುತ್ತದೆ. ಸಾವಯವ ಕೃಷಿ ಮಾಡುವ ರೈತರ ಬೆಳೆಗೆ ಉತ್ತಮ ಬೆಲೆ ದೊರೆಯುತ್ತದೆ. ಸ್ತ್ರೀಯರ ಉಡುಪುಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಬೆಲೆ ದೊರೆಯುತ್ತದೆ. ಉಸಿರಾಟದ ತೊಂದರೆ ಇರುವವರು ಸಾಕಷ್ಟು ಎಚ್ಚರವಹಿಸಿರಿ.
ತುಲಾ
ಕೃಷಿ ಸಂಬಂಧಿತ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತವೆ. ಔದ್ಯೋಗಿಕ ಕ್ಷೇತ್ರದಲ್ಲಿ ಸ್ವಲ್ಪ ಅಡಚಣೆಯನ್ನು ಎದುರಿಸಬೇಕಾದೀತು. ಗುರು ಹಿರಿಯರ ಮಾತುಗಳನ್ನು ಅಲ್ಲಗಳೆಯುವುದು ಸರಿಯಲ್ಲ. ಧನ ಆದಾಯವು ನಿರೀಕ್ಷೆಯ ಹತ್ತಿರಕ್ಕೆ ಬರುತ್ತದೆ. ಹೈನುಗಾರಿಕೆ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇದೆ. ಕುಕ್ಕುಟ ಸಾಕಾಣಿಕೆ ಮಾಡುವವರಿಗೆ ಲಾಭವಿರುತ್ತದೆ. ಕೃಷಿಕರಿಗೆ ಹೆಚ್ಚಿನ ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಮೆಕಾನಿಕಲ್ ವಿಷಯವನ್ನು ಓದುತ್ತಿರುವರೆಗೆ ಅಭಿವೃದ್ಧಿ ಇರುತ್ತದೆ. ಉದರ ಸಂಬಂಧಿ ಕಾಯಿಲೆಗಳು ಸ್ವಲ್ಪ ಕಾಡಬಹುದು. ಸಾವಯವ ಉತ್ಪನ್ನಗಳನ್ನು ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ವೃತ್ತಿಯಲ್ಲಿ ಗೊಂದಲದ ವಾತಾವರಣ ಮೂಡಬಹುದು. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ.
ವೃಶ್ಚಿಕ
ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿರಿ. ಕೆಲವು ಸ್ನೇಹಿತರು ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಪಡುವರು; ಅಂಥವರ ಬಗ್ಗೆ ಎಚ್ಚರದಿಂದಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಣ ನಿರ್ವಹಣೆ ಸರಿಯಾಗಿ ಮಾಡಿರಿ. ಮೀನುಗಾರರು ನೀರಿನಲ್ಲಿ ಜಾಗೃತರಾಗಿ ಇರಬೇಕಾದ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳಿರಿ. ಆಭರಣ ಮಾರಾಟಗಾರರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಕೃಷಿಯಿಂದ ಅಷ್ಟು ಲಾಭವಿರುವುದಿಲ್ಲ. ವೃತ್ತಿಯಲ್ಲಿ ವರ್ಗಾವಣೆಯ ಸಂದರ್ಭವಿದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಧಾರ್ಮಿಕ ಪ್ರವಾಸಗಳನ್ನು ಮಾಡುವ ಯೋಗವಿದೆ. ಕೆಲವು ಬರಹಗಾರರಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಕೃಷಿ ಭೂಮಿ ದೊರೆಯುವ ಸಂದರ್ಭವಿದೆ.
ಧನು
ಆಗುಹೋಗುಗಳನ್ನು ಅರಿತು ಹೊಸ ವ್ಯವಹಾರಗಳಿಗೆ ಕೈಹಾಕಿರಿ. ನಿಮ್ಮ ಸ್ನೇಹಿತರು ನಿಮಗೆ ಸೂಕ್ತ ಹಾಗು ಉತ್ತಮ ಸಲಹೆಯನ್ನು ಕೊಡುವರು. ಧನ ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಶತ್ರುಗಳನ್ನು ಪರಾಕ್ರಮದಿಂದ ಎದುರಿಸಿ ಅವರನ್ನು ಮೂಲೆಗುಂಪು ಮಾಡುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಭಾಷೆಗಳನ್ನು ಕಲಿಯುತ್ತಿರುವವರಿಗೆ ಹೆಚ್ಚು ಅವಕಾಶಗಳು ಓದುಗುತ್ತವೆ. ಶೀತ ಬಾಧೆ ಇರುವವರು ಎಚ್ಚರವಹಿಸಿರಿ. ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ತಾಯಿಯಿಂದ ಹೆಚ್ಚು ಸೌಕರ್ಯ ದೊರೆಯುತ್ತದೆ. ತಂದೆಯಿಂದ ವ್ಯವಹಾರದ ಒಳ ಸುಳಿಗಳನ್ನು ತಿಳಿಯಬಹುದಾಗಿದೆ. ವೃತ್ತಿಯಲ್ಲಿ ಅಭಿವೃದ್ಧಿಯಾಗುವ ಯೋಗವಿದೆ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚು ಸಂಪಾದನೆ ಇರುತ್ತದೆ.
ಮಕರ
ಹಿಡಿದ ಕೆಲಸಗಳನ್ನು ಸಾಧಿಸುವಲ್ಲಿ ಯಶಸ್ವಿ ಆಗುವಿರಿ. ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ದೊರೆಯಬಹುದು. ಚಿಲ್ಲರೆ ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಹೂವಿನ ಬೆಳೆಗಾರರಿಗೆ ಹೆಚ್ಚಿನ ಲಾಭವಿರುತ್ತದೆ. ದೇಹದಲ್ಲಿ ಉಷ್ಣಾಂಶ ಏರಿಕೆಯಿಂದ ಆರೋಗ್ಯ ತಪ್ಪಬಹುದು. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಕಾದು ನೋಡುವ ತಂತ್ರವನ್ನು ಅನುಸರಿಸಿರಿ. ಕುಟುಂಬದ ಆಂತರಿಕ ಸಮಸ್ಯೆಯೊಂದು ಮಾತುಕತೆಯ ಮೂಲಕ ಬಗೆಹರಿಯುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚುಮಾಡುವಿರಿ. ರಾಸಾಯನಿಕ ವಸ್ತುಗಳ ವ್ಯಾಪಾರವನ್ನು ಮಾಡುವವರಿಗೆ ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಧನ ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಆಸ್ತಿ ವ್ಯವಹಾರ ಮಾಡುವ ಕಮಿಷನ್ ಏಜೆಂಟರಿಗೆ ಹೆಚ್ಚಿನ ಹಣ ಬರುತ್ತದೆ.
ಕುಂಭ
ಹಿರಿಯರಿಗೆ ಸಂಘ ಸಂಸ್ಥೆಗಳಲ್ಲಿ ಅಧಿಕಾರಗಳು ದೊರೆಯುತ್ತವೆ. ವೃತ್ತಿಯಲ್ಲಿರುವವರಿಗೆ ತೃಪ್ತಿಕರವಾದ ಆದಾಯ ಇರುತ್ತದೆ. ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚು ಪರಿಶ್ರಮದಿಂದ ಯಶಸ್ಸು ದೊರೆಯುತ್ತದೆ. ಉನ್ನತ ಅಧಿಕಾರಿಗಳ ದಿಢೀರ್‌ ಭೇಟಿಯಿಂದ ಕೆಲಸ ಕಾರ್ಯಗಳಲ್ಲಿ ಏರುಪೇರಾಗಬಹುದು. ಮನೆಯ ಹೊಸ ಪೀಠೋಪಕರಣಗಳಿಗಾಗಿ ಹಣ ವ್ಯಯ ಮಾಡುವಿರಿ. ರಾಜಕೀಯ ವ್ಯಕ್ತಿಗಳಿಗೆ ಇದ್ದಕ್ಕಿದ್ದಂತೆ ಧಾರ್ಮಿಕ ಶ್ರದ್ಧೆ ಮೂಡುವುದು. ಸಂತೋಷ ಕೂಟಗಳಲ್ಲಿ ಭಾಗವಹಿಸುವ ಯೋಗವಿದೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ವಿದೇಶಕ್ಕೆ ಹೋಗಬೇಕೆಂದು ಪ್ರಯತ್ನ ಪಡುತ್ತಿರುವವರಿಗೆ ಅವಕಾಶಗಳು ಒದಗುತ್ತವೆ. ವಯಸ್ಕರ ಹುಂಬತನ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
ಮೀನ
ಹೆಚ್ಚಿನ ಓದು ಅಥವಾ ಉದ್ಯೋಗ ಸೇರುವ ಬಗ್ಗೆ ಸ್ನೇಹಿತರೊಡನೆ ವಿಚಾರ ವಿನಿಮಯ ಮಾಡಿರಿ. ಸರ್ಕಾರಿ ಗುತ್ತಿಗೆ ಮಾಡುವವರಿಗೆ ಹೊಸ ಗುತ್ತಿಗೆ ಕೆಲಸ ದೊರೆಯುತ್ತದೆ. ಹಾಗಾಗಿ ಆದಾಯದಲ್ಲಿ ಹೆಚ್ಚಳವಿರುತ್ತದೆ. ನೃತ್ಯ ಅಭ್ಯಾಸವನ್ನು ಮಾಡುವವರಿಗೆ ಮತ್ತು ಹೇಳಿಕೊಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕಿರುತ್ತದೆ. ಮನೆ ವಿಸ್ತರಣೆಯ ಬಗ್ಗೆ ಆಲೋಚನೆ ಮಾಡುತ್ತಿರುವವರು ಈಗ ವಿಸ್ತರಣೆ ಮಾಡಬಹುದು. ಹೊಸ ಸಮಾರಂಭಗಳಿಗಾಗಿ ಒಡವೆ ವಸ್ತುಗಳನ್ನು ಕೊಳ್ಳುವ ಯೋಗವಿದೆ. ದಂತ ವೈದ್ಯರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಇನ್ನೊಬ್ಬರ ಬಗ್ಗೆ ಸತ್ಯ ತಿಳಿದು ಅವರ ಬಗೆಗೆ ಇದ್ದ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ಮತ್ತು ಲಾಭವಿರುತ್ತದೆ.