ಗುರುವಾರ, 21 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ
Published 29 ಏಪ್ರಿಲ್ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹೋದ್ಯೋಗಿಗಳೊಡನೆ ಅಥವಾ ಆಪ್ತ ಸ್ನೇಹಿತರೊಡನೆ ಹಣಕಾಸಿನ ವ್ಯವಹಾರದಿಂದ ಸಂಬಂಧಕ್ಕೆ ಹುಳಿ ಹಿಂಡಿದಂತಾಗಲಿದೆ. ಪ್ರೀತಿ ಪಾತ್ರರೊಡನೆ ಆತ್ಮೀಯ ಗೆಳತನ ಇಟ್ಟುಕೊಳ್ಳಿ. ಕಾಗದಪತ್ರ ನಿರ್ವಹಣೆಯಲ್ಲಿ ಎಚ್ಚರವಹಿಸಿ.
ವೃಷಭ
ಕಲಾವಿದರಿಗೆ ಉತ್ತಮ ಅವಕಾಶವಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಕಷ್ಟಕರವಾಗಲಿದೆ. ಸಂಸ್ಥೆಯ ಆರ್ಥಿಕ ಆದಾಯ ಹೆಚ್ಚಿಸಲು ಶ್ರಮ ಅಗತ್ಯ.
ಮಿಥುನ
ಬಹುದಿನಗಳಿಂದ ಕಾಡುತ್ತಿರುವ ಅಜೀರ್ಣದ ಸಮಸ್ಯೆಯಿಂದ ಜೀವನ ಉತ್ಸಾಹ ಕಳೆದುಕೊಂಡು ಆಲಸ್ಯವನ್ನು ಹೊಂದುವಿರಿ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸಿ.
ಕರ್ಕಾಟಕ
ನಿದ್ರಾಹೀನತೆಯಿಂದಾಗಿ ಸಂಭ್ರಮದ ಸಂದರ್ಭಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮೆಕ್ಯಾನಿಕ್‌ಗಳಿಗೆ ಹೆಚ್ಚು ಆದಾಯ ತರುವ ದಿನ. ನಂಬಿಸಿ ಮೋಸ ಮಾಡುವವರ ಬಲೆಗೆ ನೀವಿಂದು ಬೀಳುವ ಸಾಧ್ಯತೆ.
ಸಿಂಹ
ಕೆಲಸದಲ್ಲಿ ಸಾಗುತ್ತಿರುವ ಮಾರ್ಗವು ಸರಿಯಾಗಿದೆ ಎಂಬ ದೃಢತೆ ನಿಮಗೆ ಬರಲಿದೆ. ದುರಭ್ಯಾಸದಿಂದ ದೂರ ಉಳಿಯುವ ಪ್ರಯತ್ನಕ್ಕೆ ಸ್ನೇಹಿತರು ತೊಂದರೆ ಮಾಡಬಹುದು.
ಕನ್ಯಾ
ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ಗಮನವಹಿಸಿ. ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶ ಪಡೆಯುವಿರಿ. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.
ತುಲಾ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ವಾಹನ ಚಾಲನೆಯಲ್ಲಿ ಅಥವಾ ಕಬ್ಬಿಣ ಕೆಲಸ ಮಾಡುವವರು ಕಾಳಜಿ ವಹಿಸಿ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ.
ವೃಶ್ಚಿಕ
ವೈಯಕ್ತಿಕವಾದ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ಅನುಕಂಪ ತೋರುವ ಬದಲು ಗೇಲಿ ಮಾಡುವವರೇ ಅಧಿಕವಾಗಿ ಸಿಗುತ್ತಾರೆ. ತಲೆನೋವಿನಂತ ಸಮಸ್ಯೆ ಎದುರಾಗಬಹುದು.
ಧನು
ಕೆಲಸವನ್ನು ಮುಂದೂಡುವ ಅಭ್ಯಾಸ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಅನಗತ್ಯವಾಗಿ ಮಧ್ಯಸ್ಥಿಕೆ ವಹಿಸುವುದು ಸಮಸ್ಯೆಯನ್ನು ಕೈಬೀಸಿ ಕರೆದಂತಾಗುತ್ತದೆ. ಜಾಗರೂಕರಾಗಿ ಇರುವುದು ಕ್ಷೇಮ.
ಮಕರ
ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಸಲಹೆ ಪಡೆದುಕೊಳ್ಳುವುದು ಅನಿವಾರ್ಯ. ಇತರರಿಗೆ ಅನುಮಾನಕ್ಕೆ ಎಡೆ ಮಾಡಿಕೊಡುವಂತಹ ಕೆಲಸಗಳು ನಿಮ್ಮಿಂದ ನಡೆಯಲಿದೆ.
ಕುಂಭ
ಹಣಕಾಸಿನ ವಿಚಾರದಲ್ಲಿ ವ್ಯವಹರಿಸುವಾಗ ದಾಕ್ಷಿಣ್ಯಕ್ಕೆ ಸಿಕ್ಕಿಕೊಳ್ಳದೇ ಇರುವ ರೀತಿಯಲ್ಲಿ ವ್ಯವಹರಿಸಿ. ಗೋವಿನ ಉತ್ಪನ್ನಗಳ ಮಾರಾಟಗಾರರಿಗೆ ಲಾಭ ಬರುವುದು. ಆರೋಗ್ಯದಲ್ಲಿ ಜಾಗ್ರತೆ ವಹಿಸಿ.
ಮೀನ
ಅಭಿವೃದ್ಧಿಯ ಅವಕಾಶಗಳು ಸಿಕ್ಕಿದರೂ, ಬಳಸಿಕೊಳ್ಳಲು ಅಸಾಧ್ಯವಾಗುವಂತಹ ಪರಿಸ್ಥಿತಿಗೆ ತಲುಪುವಿರಿ. ಮಾನಸಿಕ ಕೊರಗು ಸಂತೋಷಕ್ಕೆ ಭಂಗವನ್ನು ಉಂಟುಮಾಡುವುದು. ಮದುವೆ ವಿಷಯ ಪ್ರಸ್ತಾಪವಾಗಲಿದೆ.
ADVERTISEMENT
ADVERTISEMENT