ಸೋಮವಾರ, 11 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ದೀರ್ಘಕಾಲಿಕ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ
Published 30 ಏಪ್ರಿಲ್ 2026, 19:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ತಪ್ಪುಗಳ ಬಗ್ಗೆ ಬೇರೆಯವರು ಹೇಳುವ ಮೊದಲು ನೀವೆ ಸರಿಪಡಿಸಿಕೊಳ್ಳಿರಿ. ಕುಟುಂಬದ ಸದಸ್ಯರ ಹಿತಾಸಕ್ತಿಗೆ ಆದ್ಯತೆ ಇರಲಿ. ಹಾಲು ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭ ಆಗಲಿದೆ.
ವೃಷಭ
ಸ್ಥಗಿತಗೊಂಡ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ ಆಗುವುದು. ಹಳೆಯ ವಿಷಯಗಳನ್ನು ಅಥವಾ ಅಗಲಿದಂತಹ ವ್ಯಕ್ತಿಗಳನ್ನು ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ.
ಮಿಥುನ
ತೀರ್ಮಾನಗಳು ಇನ್ನೊಬ್ಬರ ಮನಸ್ಸಿಗೆ ಅಥವಾ ಅವರ ಭಾವನೆಗೆ ನೋವಾಗದಂತಿರಲಿ. ವೈದ್ಯಕೀಯ ವಿದ್ಯಾರ್ಥಿಗಳು ಓದಿನಲ್ಲಿ ಪರಿಶ್ರಮ ವಹಿಸಬೇಕಾಗುತ್ತದೆ. ಇನ್ನೊಬ್ಬರಿಗೆ ತಿಳಿವಳಿಕೆ ಹೇಳುವ ಕೆಲಸವನ್ನು ಮಾಡದಿರಿ.
ಕರ್ಕಾಟಕ
ದುಸ್ಥಿತಿಯಿಂದ ಹೊರ ಬರುವ ಸಾಮರ್ಥ್ಯ ನಿಮ್ಮಲ್ಲಿದೆ. ಯಾವ ಪರಿಸ್ಥಿತಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಕೆಲಸಗಳಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ತಾಳ್ಮೆ ಈ ದಿನದ ಮೂಲ ಮಂತ್ರವಾಗಿರಲಿ.
ಸಿಂಹ
ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯ. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಇರಲಿದೆ. ದೇವರ ದಯೆಯಿಂದ ಕುಟುಂಬದಲ್ಲಿ ಸಾಮರಸ್ಯ ಅಧಿಕವಾಗಿ ಇರುತ್ತದೆ.
ಕನ್ಯಾ
ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಯಾವ ಕೆಲಸದಲ್ಲೂ ಅಡೆ ತಡೆಗಳು ಇರದು. ಕುಟುಂಬದ ಸದಸ್ಯರಲ್ಲಿರುವ ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ತುಲಾ
ಆಫೀಸಿನ ವಿಷಯದಂತೆ ಮನೆಯ ವಿಷಯಗಳ ಕಡೆಗೂ ಗಮನವಹಿಸುವುದು ಒಳ್ಳೆಯದು. ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಸಿಗುವ ಸುಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳಿ.
ವೃಶ್ಚಿಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಬರಹಗಾರರಿಗೆ ವೃತ್ತಿಯಲ್ಲಿ ಅಡಚಣೆ ಉಂಟಾಗಬಹುದು. ದೀರ್ಘಕಾಲಿಕ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ.
ಧನು
ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದ್ದಲ್ಲಿ ಸಮಸ್ಯೆಗಳ ಪರಿಹಾರವನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುವುದು. ಸರ್ಕಾರಿ ಕಾಮಗಾರಿ ಕೆಲಸಗಳು ದೊರೆತು ಆರ್ಥಿಕ ಅಭಿವೃದ್ಧಿಯನ್ನು ಹೊಂದುವಿರಿ.
ಮಕರ
ಅಧಿಕಾರ ಪ್ರಾಪ್ತಿಯಲ್ಲಿ ಅಡೆತಡೆಯ ಸಂಭವವಿರುವುದು. ನಿಮ್ಮ ಕೈ ಮೀರಿದ ಕೆಲಸಗಳ ಬಗ್ಗೆ ಪುನಃ ಪುನಃ ಯೋಚಿಸುವುದು ಸರಿಯಲ್ಲ. ರಾಜಕೀಯ ವ್ಯಕ್ತಿಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಕಾರ್ಯಗಳನ್ನು ನಡೆಸಿಕೊಳ್ಳಬಹುದು.
ಕುಂಭ
ವೃತ್ತಿ ಬದುಕಿನಲ್ಲಿ ಸಂಕೋಚದ ಪ್ರವೃತ್ತಿಯಿಂದಾಗಿ ಲಾಭಗಳಿಲ್ಲದೆ ಅಧಿಕವಾದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಎಂಜಿನಿಯರ್‌ಗಳ ನಿರುದ್ಯೋಗದ ಸಮಸ್ಯೆ ಸ್ನೇಹಿತನ ಪ್ರಯತ್ನ ಬಲದಿಂದ ದೂರವಾಗಲಿದೆ.
ಮೀನ
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಇರುವುದು ಯಶಸ್ಸಿಗೆ ಅನುಕೂಲವಾಗುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಕಮಿಷನ್ ಸಿಗಲಿದೆ. ಸತ್ಯನಾರಾಯಣನ ಸೇವೆಯಿಂದ ಆರ್ಥಿಕ ಮುಗಟ್ಟು ನಿವಾರಣೆಯಾಗುವುದು.
ADVERTISEMENT
ADVERTISEMENT