ಶುಕ್ರವಾರ, 8 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ನಾಯಕತ್ವದ ಸ್ಥಾನಕ್ಕೆ ಆಯ್ಕೆಯಾಗುವ ಲಕ್ಷಣಗಳಿವೆ
Published 21 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೆಂಡತಿಯ ಆರೋಗ್ಯದ ವಿಚಾರವಾಗಿ ವೈದ್ಯರಲ್ಲಿ ಸಮಾಲೋಚನೆ ನಡೆಸಬೇಕಾಗಬಹುದು. ಸಂಜೆಯ ಸಮಯದಲ್ಲಿ ಬೆಲೆ ಬಾಳುವ ವಸ್ತು ಕಾಣೆಯಾಗುವ ಸಂಭವವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರುವುದು.
ವೃಷಭ
ಕಾಗದದ ವ್ಯಾಪಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತವಾಗಿರುತ್ತದೆ. ನಿಮ್ಮ ಸುತ್ತ ವಾತಾವರಣ ಸಂತಸದಾಯಕವಾಗಿರುತ್ತದೆ. ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು. ಕೃಷಿಕರಿಗೆ ಸಂಪಾದನೆ ಹೆಚ್ಚಲಿದೆ.
ಮಿಥುನ
ಅಪರಿಚಿತರಿಂದ ಮೋಸ ಆಗಬಹುದು, ಆದ್ದರಿಂದ ಅಪರಿಚಿತ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ವ್ಯಾಪಾರ ನೆಡೆಸುವುದು ಸರಿಯಲ್ಲ. ನಡವಳಿಕೆಯನ್ನು ಕೊಂಚ ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು.
ಕರ್ಕಾಟಕ
ಅರೆ ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹೆಚ್ಚಿನ ಅನುಕೂಲಗಳಾಗುವ ಸಾಧ್ಯತೆ ಇದೆ. ಎಲ್ಲವನ್ನೂ ಎದುರಿಸಬಲ್ಲೆನೆಂಬ ಮಾನಸಿಕ ಧೈರ್ಯವನ್ನು ತಂದುಕೊಳ್ಳಿರಿ. ನ್ಯಾಯಾಂಗ ಇಲಾಖೆಯವರಿಗೆ ವಿಚಿತ್ರ ಅನುಭವವಾಗುವುದು.
ಸಿಂಹ
ಏಕಾಂಗಿಯಾಗಿ ಮತ್ತು ಹೆಚ್ಚು ಸ್ವತಂತ್ರವಾಗಿರಲು ಇಚ್ಛಿಸಿದಲ್ಲಿ ಉತ್ತಮ ಅವಕಾಶಗಳು ಎದುರಾಗಲಿವೆ. ವಸ್ತ್ರ  ವಿನ್ಯಾಸದಲ್ಲಿ ವಿಶೇಷ ಪರಿಣತಿ ತೆಗೆದುಕೊಳ್ಳಬಹುದು. ಪಾಲುದಾರಿಕೆಯಲ್ಲಿ ನಿರ್ಲಿಪ್ತತೆಯಿಂದ ಇರುವುದು ಉತ್ತಮ.
ಕನ್ಯಾ
ಸ್ವ ಉದ್ಯೋಗಿಗಳು ಕೈ ತಪ್ಪಿ ಹೋಗಿದ್ದ ಕೆಲಸಗಳನ್ನು ಮರಳಿ ಪಡೆದುಕೊಳ್ಳುವಲ್ಲಿ ಗೆಲುವು ಕಾಣುವಿರಿ. ಕೆಲಸಗಾರರಲ್ಲಿ ಸಮಾಧಾನ ಚಿತ್ತದಿಂದಿರಿ, ಇಲ್ಲವಾದರೆ ಮಾನಹಾನಿಯಾಗಬಹುದು. ಅರಣ್ಯ ಪಾಲಕರಿಗೆ ಬಡ್ತಿ ಸಂಭವವಿದೆ.
ತುಲಾ
ಜೀವನದ ಯಾವುದೇ ರಂಗದಲ್ಲಾದರೂ ನಿಮ್ಮ ಬಯಕೆಗೆ ತಕ್ಕಂತೆ ದೂರ ಕ್ರಮಿಸುವ ಸಾಮರ್ಥ್ಯ ನಿಮ್ಮಲ್ಲಿರುವುದು ಮತ್ತು ಈ ದಿನ ಮಾರ್ಗ ಗೋಚರವಾಗುವುದು. ನಾಯಕತ್ವದ ಸ್ಥಾನಕ್ಕೆ ಆಯ್ಕೆಯಾಗುವ ಲಕ್ಷಣಗಳಿವೆ.
ವೃಶ್ಚಿಕ
ಕೋರ್ಟು ಕಛೇರಿಯ ಕೆಲಸ ಕಾರ್ಯಗಳು ಯಾವುದೇ ರೀತಿಯ ಪರದಾಟವಿಲ್ಲದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ನಿಮಗಿರುವ ವ್ಯಾವಹಾರಿಕ ಸಂಬಂಧಗಳು ವಿಸ್ತಾರಗೊಳ್ಳುವ ಸಮಯ ಇದಾಗಿದೆ. ಪರೀಕ್ಷೆಗಳಲ್ಲಿ ಜಯ ಗಳಿಸುವಿರಿ.
ಧನು
ಪರರಿಗೆ ಉಪಕಾರ ಮಾಡುವುದು ಕಷ್ಟವೆನಿಸಿದರೆ ಸುಮ್ಮನಿರಿ, ಉಪದ್ರವ ಮಾಡಬೇಡಿ. ಔಷಧಿಗಳ ಬಳಕೆಯಲ್ಲಿ ಜ್ಞಾನವಿರಲಿ ಮತ್ತು ನಿಮ್ಮ ಸ್ವಇಚ್ಛೆಯಂತೆ ಸೇವಿಸಬೇಡಿ. ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ.
ಮಕರ
ಸಂಬಂಧಿಗಳ ಅಪಹಾಸ್ಯದ ಮಾತುಗಳಿಂದ ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಂಡು ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಆಪ್ತ ಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು.
ಕುಂಭ
ಭಾಷಣ, ಚಿತ್ರಕಲೆಯಲ್ಲಿನ ನಿಮ್ಮ ಆಸಕ್ತಿಯಿಂದಾಗಿ, ಹೆಚ್ಚಿನ ಕಲಿಕೆಗಾಗಿ ಸಮಯವನ್ನು ಮೀಸಲಿಡುವ ತೀರ್ಮಾನ ಮಾಡಿ. ದಾಯಾದಿ ವರ್ಗದವರಿಂದ ನಿಮ್ಮ ಕೆಲಸಕ್ಕೆ ಅಪರೂಪಕ್ಕೆ ಅನುಕೂಲ ಉಂಟಾಗಲಿದೆ.
ಮೀನ
ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ನಿರ್ಧಾರಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಸರಿಯಾಗಿ ಸ್ಪಷ್ಟ ಪಡಿಸುವುದು ಒಳ್ಳೆಯದು. ಜೀವನ ಶೈಲಿಯನ್ನು ಇನ್ನೊಬ್ಬರ ಬಲವಂತದ ಮೇಲೆ ಬದಲಾಯಿಸಿಕೊಳ್ಳಬೇಕಾಗುತ್ತದೆ.
ADVERTISEMENT
ADVERTISEMENT