ಮಂಗಳವಾರ, 14 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 4 ಶನಿವಾರ 2026– ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ
Published 3 ಏಪ್ರಿಲ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧಾನ್ಯ ಹಾಗೂ ಮಸಾಲೆ ಪದಾರ್ಥಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ ಇರಲಿದೆ. ಕಚೇರಿಯ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ.
ವೃಷಭ
ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಹಣದ ವಿಚಾರದಲ್ಲಿ ಮಿತ ವ್ಯಯಿಗಳಾಗುವಿರಿ.
ಮಿಥುನ
ಮನೆಯಲ್ಲಿ ನಡೆಯಬೇಕಿರುವ ಕಾರ್ಯಕ್ರಮಗಳ ಬಗ್ಗೆ ಒಡಹುಟ್ಟಿದವರೊಡನೆ ಮಾತುಕತೆ ನಡೆಯಲಿದೆ. ಪ್ರೀತಿಯ ವಿಚಾರದಲ್ಲಿ ಗುಣಾತ್ಮಕ ಬೆಳವಣಿಗೆ ಅನುಭವಕ್ಕೆ ಬಂದೀತು. ವಿದೇಶಿ ವಸ್ತುಗಳ ಮೇಲೆ ಹಣ ವ್ಯಯ.
ಕರ್ಕಾಟಕ
ಪಾಲುದಾರಿಕೆ ವ್ಯವಹಾರದಲ್ಲಿ ಬುದ್ಧಿಶಕ್ತಿಯಿಂದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಇದ್ದಲ್ಲಿ ಲಾಭವಾಗುವುದು. ಗಂಟಲು ಬೇನೆ ಕಾಣಿಸಿಕೊಂಡಲ್ಲಿ ಗಿಡಮೂಲಿಕೆಗಳ ಬಳಕೆಯಿಂದ ಶಮನವಾಗುವುದು.
ಸಿಂಹ
ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಪೂರ್ವ ತಯಾರಿ ಅನಿವಾರ್ಯ. ಎಲ್ಲವನ್ನು ಸ್ವಂತವಾಗಿಯೇ ಮಾಡಬಲ್ಲೆನೆಂಬ ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ.
ಕನ್ಯಾ
ಪೂರ್ವ ನಿಯೋಜಿತ ಕೆಲಸ ನೆರವೇರುವುದರಿಂದ ನೆಮ್ಮದಿ ಇರುವುದು. ವಿನಾ ಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆಯಿಂದ ಇರಿ.
ತುಲಾ
ದಿನಚರಿಯಲ್ಲಿ ತಪ್ಪುಗಳ ಬಗ್ಗೆ ಮನವರಿಕೆ ಆಗುವುದು. ಮನೆಯಲ್ಲಿ ಆನಂದದ ವಾತಾವರಣ ಇರಲಿದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ.
ವೃಶ್ಚಿಕ
ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆಯನ್ನು ಇಬ್ಬರೂ ಪರಸ್ಪರವಾಗಿ ಕಾಪಾಡಿಕೊಳ್ಳಿ. ಯಾರಿಗೂ ಸಾಲದ ರೂಪದಲ್ಲಿ ಹಣ ನೀಡಬೇಡಿ.
ಧನು
ತಂದೆಯ ಅನಾರೋಗ್ಯ ಬದಲಾವಣೆಗೆ ಕಾರಣವಾಗುವುದು. ಉದಾರ ಮನೋಭಾವ ಅನುಕೂಲ ಒದಗಿಸಲಿದೆ. ವ್ಯವಹಾರದಲ್ಲಿ ನುರಿತವರ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಿ.
ಮಕರ
ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವಂತಾಗಬಹುದು ಎಚ್ಚರವಿರಲಿ. ಸತ್ಕಾರ್ಯದ ಯತ್ನಗಳು ಕೈಗೂಡಲು ತಾಳ್ಮೆ ವಹಿಸಿ. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಅತೀವ ಸಂತೋಷ.
ಕುಂಭ
ಅಕ್ಕ-ಪಕ್ಕದಲ್ಲಾಗುವ ಸನ್ನಿವೇಶಗಳು ಪ್ರಾಮಾಣಿಕತೆಗೆ ಅಥವಾ ಸ್ವಾಮಿ ನಿಷ್ಠೆಗೆ ಬೆಲೆ ಇಲ್ಲವೆಂದು ಕಾಣಿಸುವುದು, ಅದರ ಫಲವಾಗಿ ಸ್ವಭಾವವನ್ನು ಬದಲಿಸಿಕೊಳ್ಳಬೇಡಿ. ಸಾಂಸಾರಿಕ ಸುಖದಲ್ಲಿ ಅಭಿವೃದ್ಧಿ ಅಪೇಕ್ಷಿಸಬಹುದು.
ಮೀನ
ಅತಿ ಬುದ್ಧಿವಂತ ಜನರಲ್ಲಿ ವ್ಯವಹಾರ ನಡೆಸಬೇಕಾಗುವುದರಿಂದ ಜಾಗ್ರತೆ ಇರಲಿ. ಗುರಿಯನ್ನು ಸಾಧಿಸುವ ಬಗ್ಗೆ ಮಾತ್ರ ಗಮನವಿರಲಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.
ADVERTISEMENT
ADVERTISEMENT