ಬುಧವಾರ, 15 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 5 ಭಾನುವಾರ 2026– ಕಮಿಷನ್ ಏಜೆಂಟ್‌ಗಳಿಗೆ ಇಂದು ಅಧಿಕ ಆದಾಯ
Published 4 ಏಪ್ರಿಲ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂದೆ ನಡೆದುಹೋದಂತಹ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಹಾಸ್ಯ ಕಲಾಕಾರರಿಗೆ ಬೇಡಿಕೆ ಹೆಚ್ಚುವುದು.
ವೃಷಭ
ವಂಶ ಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಈಗ ಹೆಚ್ಚಿನ ಏಳಿಗೆ ಇದೆ. ಆದಾಯ ಹಂತಹಂತವಾಗ ಭಿವೃದ್ಧಿದಾಯಕವಾಗಿದ್ದು, ಧನ ಸಂಗ್ರಹಕ್ಕೆ ಸಾಧಕವಾಗಲಿದೆ. ಮಂಗಳ ಕಾರ್ಯಗಳನ್ನು ನಡೆಸಿ ಕೊಡಲು ಒಪ್ಪುವಿರಿ.
ಮಿಥುನ
ಆರಕ್ಷಕರು ಮತ್ತು ರಾಜಕಾರಣಿಗಳು ನಿಮ್ಮಿಂದಲೇ ತಪ್ಪುಗಳು ನಡೆಯುವ ಸಂಭವವು ಹೆಚ್ಚಿರುವುದರಿಂದ ಜಾಗರೂಕತೆ ವಹಿಸಬೇಕಾಗುತ್ತದೆ. ಕಮಿಷನ್ ಏಜೆಂಟ್‌ಗಳಿಗೆ ಇಂದು ಅಧಿಕ ಆದಾಯ.
ಕರ್ಕಾಟಕ
ಸಹೋದರರ ಸಲಹೆಯನ್ನು ಪಡೆದು ನಿಮ್ಮ ಹಳೆಯ ಯೋಜನೆಗಳಿಗೆ ಮರುಜೀವ ಕೊಡಲು ನಿಶ್ಚಯಿಸಬಹುದು. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿರುವುದರಿಂದ ಜಾಗ್ರತೆ ಇರಲಿ.
ಸಿಂಹ
ಎಲ್ಲ ದಾರಿಗಳೂ ಸುಗಮ ಎನಿಸಿ ಎಲ್ಲ ಕಷ್ಟಗಳೂ ನಿವಾರಣೆಯಾಗಲಿವೆ. ರಾಜಕೀಯದವರಿಗೆ ನಿರೀಕ್ಷಿತ ಕಾರ್ಯ ಸಾಧನೆ ತೃಪ್ತಿ ತರುತ್ತದೆ. ಮಾನಸಿಕ ಸ್ಥಿತಿ ಏರುಪೇರಾದ ಸಮಯದಲ್ಲಿ ಹಿರಿಯರ ಸಲಹೆ ಸಮಾಧಾನ ತರುತ್ತದೆ. ‌
ಕನ್ಯಾ
ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆರಡೂ ತನ್ನ ಇರುವಿಕೆಯನ್ನು ತಿಳಿಸಲಿವೆ. ಸಮಸ್ಯೆ ಹೆಚ್ಚುವುದಕ್ಕೆ ಮುಂಚೆ ಜಾಣ್ಮೆಯಿಂದ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಿ. ಈ ದಿನ ನಿಮ್ಮ ಆರೋಗ್ಯವು ಸುಧಾರಿಸುವುದು.
ತುಲಾ
ವಿವಾಹ ವಿಷಯಗಳಲ್ಲಿ ಮಗಳ ಅಭಿಪ್ರಾಯ ಪಡೆದು ಮುಂದುವರಿಯುವುದು ಉತ್ತಮ. ಭೂ ಸಂಬಂಧದ ವ್ಯವಹಾರದಲ್ಲಿ ನಿಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದಲ್ಲಿ ವ್ಯವಹಾರಗಳು ಕೈಗೂಡಲಿವೆ.
ವೃಶ್ಚಿಕ
ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ ಅವರ ವೈಯಕ್ತಿಕ ವಿಚಾರವನ್ನು ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ತೆಂಗು ಬೆಳೆಗಾರರಿಗೆ ಉತ್ತಮ ಬೆಳೆಯ ಜೊತೆಗೆ ಹೆಚ್ಚಿನ ಲಾಭವೂ ಇರುವುದು.
ಧನು
ನಿಮ್ಮ ಜವಾಬ್ದಾರಿಯಿಂದ ನಡೆಯುತ್ತಿರುವ ಸಂಘ ಸಂಸ್ಥೆಯ ಸಭೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಅವರನ್ನು ಸಮಾಧಾನದಿಂದ ಎದುರಿಸುವುದು ನಿಮ್ಮ ಬುದ್ಧಿವಂತಿಕೆಯ ಗುಣ. ರೈತರಿಗೆ ಕೆಲಸ ಕಾರ್ಯಗಳಿಗೆ ತಡೆ ಬರಬಹುದು.
ಮಕರ
ನಿಮ್ಮಿಂದ ನಡೆಯದೇ ಇರುವ ತಪ್ಪುಗಳ ಅಪವಾದವನ್ನು ಹೊರ ಬೇಕಾಗಬಹುದು. ನಿಮ್ಮ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲ ಉಂಟಾಗುವುದು. ಸಿಹಿ ತಿಂಡಿಗಳ ತಯಾರಕರಿಗೆ ಬೇಡಿಕೆ ಹೆಚ್ಚುವುದು.
ಕುಂಭ
ಗೆಳೆಯನ ಅನಿರೀಕ್ಷಿತ ಆಗಮನ ಸಮಯವನ್ನು ವ್ಯರ್ಥ ಮಾಡಿಸಿದರೂ ಮನಸ್ಸಿಗೆ ಸಂತೋಷ ಉಂಟಾಗುವುದು. ಕೆಲಸವು ವಿಳಂಬವಾಗಿ ನೆರೆವೇರುವುದು. ಸಮಸ್ಯೆಗೆ ಧೈರ್ಯವೇ ಪರಿಹಾರ ಎಂಬುವುದನ್ನು ಮರೆಯದಿರಿ.
ಮೀನ
ಇಂದು ನಿಮ್ಮ ನಿಯಮವನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ವರ್ತಿಸುವ ಅನಿವಾರ್ಯ ಎದುರಾಗುವುದು. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು, ಯೋಗಾಭ್ಯಾಸದಿಂದ ಸರಿಪಡಿಸಿಕೊಳ್ಳಿರಿ.
ADVERTISEMENT
ADVERTISEMENT