ಗುರುವಾರ, 21 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
29/03/2026 - 04/04/2026
ದಿನ ಭವಿಷ್ಯ: ಮಾರ್ಚ್ 30 ಸೋಮವಾರ 2026– ಇಂದು ಯಾತ್ರೆಯ ಯೋಚನೆ ಬರಲಿದೆ
Published 29 ಮಾರ್ಚ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂದಿನಿಂದ ಬಂದ ಕಷ್ಟ ಕಾರ್ಪಣ್ಯಗಳಿಗೆ ಮಾರ್ಗದರ್ಶಕರ ಮೂಲಕ ದಾರಿ ಸಿಗುವುದು ನಿಶ್ಚಿತ. ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅನುಕೂಲಕರ ದಿನ.
ವೃಷಭ
ಗುತ್ತಿಗೆದಾರರು ಹಣ ಉಳಿಸುವ ಪ್ರಯತ್ನಕ್ಕಿಂತ ಹೆಸರು ಸಂಪಾದಿಸುವ ವಿಷಯಕ್ಕೆ ಗಮನನೀಡಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಸ್ವಭಾವ ಹೊಂದಿದರೆ ನಷ್ಟ ಸಂಭವಿಸಲಿದೆ. ಯಾತ್ರೆಯ ಯೋಚನೆ ಬರಲಿದೆ.
ಮಿಥುನ
ಸ್ವ ಉದ್ಯೋಗ ಪ್ರಾರಂಭಿಸುವ ಯೋಚನೆಗೆ ನಿಯೋಜಿತ ರೀತಿಯಲ್ಲಿ ತಯಾರಿಯ ಹಂತ ಪ್ರಾರಂಭವಾಗುವುದು. ಉದಯೋನ್ಮುಖ ತಾರೆಯರಿಗೆ ಅವಕಾಶ ಸಿಗಲಿದೆ.
ಕರ್ಕಾಟಕ
ಅನಿವಾರ್ಯ ಪರಿಸ್ಥಿತಿಗೂ ಯಾರಿಗೂ ಸಾಲ ಕೊಡಬೇಡಿ. ಅವಿವಾಹಿತರಿಗೆ ಸೋದರ ಮಾವನ ಸಹಾಯದಿಂದ ವಿವಾಹ ಸಂಬಂಧಗಳು ಕೂಡಿ ಬರಲಿವೆ.
ಸಿಂಹ
ತಾಂತ್ರಿಕ ಉದ್ಯೋಗಿಗಳಿಗೆ ವೃತ್ತಿ ತಾತ್ಕಾಲಿಕ ಸಮಾಧಾನವನ್ನು ತಂದರೂ ಬದಲಾವಣೆಗೆ ಅವಕಾಶ ಇರುತ್ತದೆ. ಬಂದ ಅವಕಾಶವನ್ನು ಬಳಸಿಕೊಳ್ಳಿ. ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ.
ಕನ್ಯಾ
ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚಿಸಿದರೆ ಅಭಿವೃದ್ಧಿಯ ಹಾದಿ ಹಿಡಿಯುವಿರಿ. ಉಪನ್ಯಾಸಕರಿಗೆ, ಸಂಗೀತಗಾರರಿಗೆ ಸನ್ಮಾನದಂತಹ ಗೌರವ ಸಿಗಲಿದೆ.
ತುಲಾ
ವೈಯಕ್ತಿಕ ಹಾಗೂ ವೃತ್ತಿ ಚಟುವಟಿಕೆಯಲ್ಲಿ ಯಶಸ್ಸು ಸಾಧಿಸಲು ಕೊಂಚ ಶ್ರಮ ವಹಿಸಬೇಕಾದೀತು. ಚಾಲಕ ವೃತ್ತಿಯವರು ಕೆಲಸದಲ್ಲಿ ಒತ್ತಡ ಎದುರಿಸಬೇಕಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.
ವೃಶ್ಚಿಕ
ಸ್ನೇಹಿತರಲ್ಲಿ ಸಂಶಯ, ಅಪನಂಬಿಕೆ ಬಾರದಂತೆ ಮನಸ್ಥಿತಿ ಕಾಪಾಡಿಕೊಳ್ಳಿ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಅಗತ್ಯಗಳನ್ನು ಪೂರೈಸಿ. ಸಿದ್ಧಿವಿನಾಯಕನಿಗೆ ಸೇವೆ ಮಾಡುವುದರಿಂದ ಶುಭ.
ಧನು
ಮೃದು ಮನಸ್ಸು ವೃತ್ತಿಯಲ್ಲಿ ಹೊಂದಿಕೊಳ್ಳಲು ಉಪಯೋಗವಾಗುವುದು. ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಆಲಸ್ಯತನವನ್ನು ದೂರಮಾಡಿ.
ಮಕರ
ಮನೆಯ ವಿಷಯಗಳತ್ತ, ದೈನಂದಿನ ಆಗುಹೋಗುವ ಬಗ್ಗೆ ಹೆಚ್ಚಿನ ಗಮನಹರಿಸ ಬೇಕಾಗುವುದು. ಆತ್ಮೀಯರೊಂದಿಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವಿರಿ. ಸಹೋದರರೊಂದಿಗೆ ಕಾಲ ಕಳೆಯುವಿರಿ.
ಕುಂಭ
ದೇವತಾನುಗ್ರಹದ ಕೊರತೆ, ಮನುಷ್ಯ ಪ್ರಯತ್ನವೂ ಇಲ್ಲದ ಕಾರಣ ಯತ್ನಿಸಿದ ಕಾರ್ಯ ವಿಳಂಬವಾಗುವುದು. ಉದ್ಯೋಗದಲ್ಲಿ ಎದುರಾಗಿದ್ದ ಚಿಂತೆ ದೂರಾಗುವುದು. ಕೆಲಸಕ್ಕೆ ನೇರ ಆಯ್ಕೆಗೊಳ್ಳುವ ಸಂಭವವಿದೆ.
ಮೀನ
ಮುಂದಾಲೋಚನೆ ಇಲ್ಲದೇ ಭರವಸೆಯನ್ನೂ ನೀಡಬೇಡಿ. ಆಡಿದ ಮಾತನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಸಣ್ಣ-ಪುಟ್ಟ ವಿಚಾರಕ್ಕೂ ನೆರೆಹೊರೆಯವರ ಕಿರಿಕಿರಿ ತಪ್ಪದು.
ADVERTISEMENT
ADVERTISEMENT