ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
16/04/2023 - 22/04/2023
ವಾರ ಭವಿಷ್ಯ | 2023 ಏಪ್ರಿಲ್ 16, ಭಾನುವಾರದಿಂದ ಏಪ್ರಿಲ್‌ 22, ಶನಿವಾರದವರೆಗೆ
Published 17 ಏಪ್ರಿಲ್ 2023, 7:44 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ಸಹೋದ್ಯೋಗಿಯ ಸಲಹೆ ಅತಿ ಸೂಕ್ತವಾಗಿದ್ದು ಅದರಂತೆ ನಡೆದು ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭವನ್ನು ಕಾಣುವಿರಿ. ವಾದ ಮಾಡುವ ಅಭ್ಯಾಸ ದಿಂದ ಸಂಬಂಧಗಳು ಕೆಡಬಹುದು. ಯಾವುದೇ ಕಟ್ಟು ಪಾಡಿಗೆ ಬೀಳದೆ ಶ್ರದ್ಧೆಯಿಂದ ಕೆಲಸಮಾಡುವುದು ಒಳ್ಳೆಯದು. ಧಾರ್ಮಿಕ ಕೆಲಸಗಳನ್ನು ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ಸ್ವಲ್ಪ ಸಂಪಾದನೆ ಕೂಡ ಆಗುತ್ತದೆ. ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಹೆಚ್ಚಿನಮನ್ನಣೆ ದೊರೆಯುತ್ತದೆ. ರಾಜಕೀಯ ಚಟುವಟಿಕೆಯಲ್ಲಿರುವ ವರು ತಮ್ಮ ವೈಯಕ್ತಿಕ ನಡವಳಿಕೆ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು.ಹಣದ ಒಳಹರಿವು ಮಧ್ಯಮ ಗತಿಯಲ್ಲಿ ರುತ್ತದೆ. ಕಬ್ಬಿಣದ ಅಲಂಕಾರಿಕ ವಸ್ತುಗಳನ್ನು ತಯಾರಿ ಸುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಅಂತಹ ಏರಿಳಿತ ಇರುವುದಿಲ್ಲ. ಸಂಗಾತಿಯ ನಡವಳಿಕೆ ನಿಮಗೆ ಬೇಸರತರಿಸಬಹುದು.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಜನರ ಸಂಪರ್ಕ ದೊರೆತು ಉದ್ಯೋಗಅಭಿವೃದ್ಧಿಯಾಗುತ್ತದೆ. ಚರ್ಮದ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ತಪ್ಪು ತಿಳುವಳಿಕೆಯಿಂದ ಅಥವಾ ಅತಿಯಾದಆಸೆಯಿಂದಹಣಕಳೆದುಕೊಳ್ಳುವ ಸಾಧ್ಯತೆ ಇದೆ,ಎಚ್ಚರ ವಹಿಸಿರಿ. ಕೌಟುಂಬಿಕವಾಗಿ ಇದ್ದ ಕ್ಲೇಶಗಳು ದೂರವಾಗುತ್ತವೆ. ವೈಯಕ್ತಿಕವಾಗಿ ಶುಭ ಸಮಾಚಾರ ಗಳನ್ನು ಕೇಳುವ ಯೋಗವಿದೆ ಕಟ್ಟಡ ನಿರ್ಮಾಣ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣ ಬಹುದು. ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳೊಡನೆ ಒರಟು ಮಾತು ಖಂಡಿತ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಪಡೆಯುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರ ಸರಿ ಎಂದು ಈಗ ತಿಳಿಯುತ್ತದೆ. ಖಾಸಗಿ ಉದ್ಯೋಗಿಗಳು ತಮ್ಮ ಆದಾಯ ಏರಿಕೆ ವಿಚಾರವನ್ನು ಮೇಲಧಿಕಾರಿ ಗಳಲ್ಲಿ ಪ್ರಸ್ತಾಪಿಸಬಹುದು. ಕೆಲವರಿಗೆ ಕಚೇರಿ ಕಡೆ ಯಿಂದ ವಿದೇಶ ಪ್ರಯಾಣ ಯೋಗ ದೊರೆಯುತ್ತದೆ. ಹೊಸ ವಾಹನ ವಹಿವಾಟು ಮಾಡುವವರಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಕೊಡುಕೊಳ್ಳುವವ್ಯವಹಾರ ಗಳಲ್ಲಿ ಲಾಭವಿರುತ್ತದೆ. ವಿವಾಹ ಯೋಗ್ಯರಿಗೆ ಶೀಘ್ರ ಸಂಬಂಧ ದೊರೆಯುವ ಸಾಧ್ಯತೆ ಇದೆ. ರೇಷ್ಮೆ ಉತ್ಪಾದನೆಗಾಗಿ ಹೆಚ್ಚು ಬಂಡವಾಳ ಹೂಡುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕಾರ್ಯತಂತ್ರಗಳಿಂದ ವ್ಯವಹಾರದಲ್ಲಿನ ಎದುರಾಳಿ ಯನ್ನು ಮಣಿಸುವಿರಿ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಎನಿಸಿದರೂ ಕಾರ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ಗಣಿತದಲ್ಲಿ ಪರಿಣತಿ ಹೊಂದಿರುವವರಿಗೆ ವಿದೇಶಿ ಕಂಪನಿಗಳಲ್ಲಿ ಉತ್ತಮ ಸ್ಥಾನ ಸಿಗುತ್ತದೆ. ಸಂದರ್ಶನಗಳಲ್ಲಿ ಧೈರ್ಯವಾಗಿ ಉತ್ತರಿಸಿದಾಗ ಯಶಸ್ಸು ನಿಮ್ಮೊಡನೆ ಇರುತ್ತದೆ. ಆರ್ಥಿಕ ಸ್ಥಿತಿಯು ಮಧ್ಯಮಗತಿಯಲ್ಲಿರುತ್ತದೆ. ದೊಡ್ಡಮಟ್ಟದ ವ್ಯವಹಾರ ನಡೆಸುವವರಿಂದ ಪಾಲುದಾರಿಕೆಗೆ ಕರೆ ಬರಬಹುದು, ಸದುಪಯೋಗ ಮಾಡಿಕೊಳ್ಳಿರಿ. ವಿದೇಶಿ ವ್ಯವಹಾರಗಳಲ್ಲಿ ಹೂಡಿದ ಬಂಡವಾಳಗಳು ಹೆಚ್ಚಳವನ್ನು ಕಾಣು ತ್ತವೆ. ಬಂಧುಗಳ ನಡುವೆ ಸಮಸ್ಯೆ ಬಗೆಹರಿಸು ವಾಗ ವಿವಾದಕ್ಕೆ ಆಸ್ಪದ ಕೊಡಬೇಡಿರಿ. ವೃತ್ತಿಯಿಂದ ಸ್ವಲ್ಪ ಆದಾಯ ಹೆಚ್ಚಾಗುತ್ತದೆ. ಆಸೆ ಪಟ್ಟ ಒಡವೆವಸ್ತು ಗಳನ್ನು ಕೊಳ್ಳುವಯೋಗವಿದೆ. ವಿದ್ಯಾರ್ಥಿಗಳಿಗೆ ಅಂತಹ ಯಶಸ್ಸು ಇರುವುದಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗಳನ್ನುಕಾಣಬಹುದು.ಸಂಗಾತಿ ಯೊಡನೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಹಳೆಯ ವಾಹನವನ್ನು ಮಾರಾಟ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇದೆ. ಮೂಳೆ ನೋವುಗಳಿಗಾಗಿ ಚಿಕಿತ್ಸೆ ಪಡೆಯುವಿರಿ. ನಿಮ್ಮ ಆಲೋಚನೆಗಳನ್ನು ಇತರರೊಡನೆ ಮುಕ್ತವಾಗಿ ಹಂಚಿಕೊಳ್ಳಬೇಡಿರಿ, ಇದು ವಾಗ್ವಾದಕ್ಕೆ ಕಾರಣವಾಗಬಹುದು. ದನಾದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಕೃಷಿಕರಿಗೆ ಹೆಚ್ಚಿನ ಲಾಭ ವಿರುತ್ತದೆ ಸ್ವಂತ ಉದ್ದಿಮೆಗಾರರಿಗೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಗವಿದೆ. ಆಭರಣಗಳ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಒಡಹುಟ್ಟಿದವರಿಂದ ಸಮಸ್ಯೆ ಎದುರಾಗಬಹುದು. ಸ್ಥಿರಾಸ್ತಿಯನ್ನು ಹೊಂದುವ ಯೋಗ ವಿದೆ. ಶಾಲಾ ಕಾಲೇಜು ನಡೆಸುವವರಿಗೆ ಸಾಮಾಜಿಕ ಅಪವಾದ ಬರಬಹುದು. ವಿದೇಶಕ್ಕೆ ಸಂಸ್ಕರಿಸಿದ ಅದಿರನ್ನು ರಫ್ತು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ದಂಡ ಕಟ್ಟುವ ಪರಿಸ್ಥಿತಿ ಎದುರಾಗಬಹುದು ಹಾಗಾಗಿ ಜಾಗ್ರತೆಯಿಂದ ಕೆಲಸ ಮಾಡಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.ಹಿತ್ತಾಳೆ ತಾಮ್ರಮುಂತಾದ ಲೋಹಗಳ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಶುಭ ಕಾರ್ಯಗಳನ್ನು ಆಯೋಜಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ವೃತ್ತಿಯಲ್ಲಿಎದುರಾಗುವ ತೊಂದರೆಯನ್ನು ಅರಿತು ನಿವಾರಿಸಿಕೊಳ್ಳಿರಿ. ಹೊಸ ಯೋಜನೆಯನ್ನು ಆರಂಭಿಸುವ ಮುನ್ನ ಅದರಖರ್ಚು ವೆಚ್ಚಗಳ ಬಗ್ಗೆ ಆಲೋಚಿಸಿರಿ. ಸಂಗಾತಿಯು ನಿಮ್ಮ ಮಾತಿನಂತೆ ನಡೆದು ಸಂಸಾರದ ಏಳಿಗೆಗೆ ದುಡಿಯು ತ್ತಾರೆ. ಉದರ ಸಂಬಂಧಿ ದೋಷಗಳು ಕಾಡಬಹುದು. ಕೆಲವರಿಗೆ ಅನಿರೀಕ್ಷಿತವಾಗಿ ವಿದೇಶ ಯಾನ ಮಾಡುವ ಯೋಗವಿದೆ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ಔಷಧಿ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗುವ ಸಾಧ್ಯತೆ ಇದೆ. ಸರಕು ಸಾಗಣೆ ಮಾಡುವವರ ಆದಾಯ ಹೆಚ್ಚಾಗಲಿದೆ. ಕಾರ್ಯ ಒತ್ತಡದಿಂದ ವೃತ್ತಿಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ.ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗ ಳಿಗೆ ಹೆಚ್ಚಿನ ವ್ಯವಹಾರವಾಗುತ್ತದೆ. ನೀರಿನ ವ್ಯತ್ಯಾಸ ದಿಂದ ಆರೋಗ್ಯ ವ್ಯತ್ಯಾಸವಾಗಬಹುದು. ಆರಂಭ ದಲ್ಲಿ ಅತಿ ಉತ್ಸಾಹದಿಂದ ಶುರು ಮಾಡಿದ ಕೆಲಸಗಳು ನಿಲ್ಲುವ ಸಂದರ್ಭಗಳಿವೆ. ತಾಂತ್ರಿಕ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಫಲಿತಾಂಶ ಇರುತ್ತದೆ. ವಿದೇಶಕ್ಕೆ ಒಡವೆಯನ್ನು ರಫ್ತು ಮಾಡುವವ ರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಕೃಷಿಕರಿಗೆ ಹೆಚ್ಚಿನ ಆದಾಯವಿರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ನ್ಯಾಯಾಲಯದಲ್ಲಿ ಇದ್ದ ಸಮಸ್ಯೆಗಳಿಗೆ ಈಗ ಉತ್ತರ ಸಿಗುತ್ತದೆ. ಕುಶಲಕರ್ಮಿಗಳಿಗೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟದಿಂದ ಆದಾಯ ಸ್ವಲ್ಪ ಹೆಚ್ಚುತ್ತದೆ. ಈ ದಿನ ಈಗ ಬರುವ ಆಲೋಚನೆಗಳು ನಿಮ್ಮ ಖರ್ಚಿಗೆ ದಾರಿ ಮಾಡಿಕೊಡುತ್ತವೆ. ಶೇರುಪೇಟೆ ವ್ಯವಹಾರದಿಂದ ಅಂತಹ ಅಭಿವೃದ್ಧಿ ಇಲ್ಲ. ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ವ್ಯವಹಾರವಾಗುತ್ತದೆ. ರಾಜಕಾರಣಿಗಳು ಮಾಡುತ್ತಿದ್ದ ಒಳ ವ್ಯವಹಾರಗಳು ಬಯಲಾಗಬಹುದು. ದೇವರ ಕೆಲಸಗಳಿಗಾಗಿ ಮುನ್ನುಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗಾತಿಯ ಮಾಸಿಕ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವಿದ್ಯುತ್ ಜೊತೆಗೆಕೆಲಸಮಾಡುವವರು ಹೆಚ್ಚು ಎಚ್ಚರ ವಹಿಸುವುದು ಉತ್ತಮ.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ನಿಮ್ಮ ಸರಳ ವ್ಯಕ್ತಿತ್ವ ಗೌರವವನ್ನು ಹೆಚ್ಚಿಸುತ್ತದೆ. ಮಾತಿನ ಚತುರತೆಯಿಂದ ಇತರರನ್ನು ಗೆಲ್ಲುವಿರಿ. ಪೋಲಿಸ್ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಿಗೆ ಇರುತ್ತದೆ. ಹೂವು ಮತ್ತು ಹಣ್ಣು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಯಂತ್ರೋಪ ಕರಣಗಳನ್ನು ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ಗಳು ದೊರೆಯುತ್ತವೆ. ಪಶು ಸಂಗೋಪನೆ ಮಾಡುವ ವರಿಗೆ ಆದಾಯ ಹೆಚ್ಚುತ್ತದೆ. ಸರ್ಕಾರಿ ಗುತ್ತಿಗೆ ಕಾಮಗಾರಿಗಳನ್ನು ಮಾಡುವವರಿಗೆ ಉತ್ತಮ ಗುತ್ತಿಗೆ ಕಾಮಗಾರಿಯೊಂದು ದೊರೆಯುವ ಸಂದರ್ಭವಿದೆ. ಮಹಿಳೆ ಯರಿಗೆ ನೌಕರಿ ಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳಿದ್ದರೂ ಏನು ತೊಂದರೆ ಇಲ್ಲ. ವಿದೇಶಿ ಭಾಷಾಕಲಿಕೆ ಮಾಡುವ ವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶದೊರೆಯು ತ್ತದೆ. ಕೃಷಿ ಯಿಂದ ಆದಾಯವಿದೆ. ಕೃಷಿಭೂಮಿಯನ್ನು ಕೊಳ್ಳುವ ಅವಕಾಶವಿದೆ.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಗುಣ ನಿಮಗೆ ಸಿದ್ಧಿಸುತ್ತದೆ. ನಿಮ್ಮ ಅನಿವಾರ್ಯಗಳಿಗೆ ಸಂಬಂಧಿಕರಿಂದ ಧನಸಹಾಯ ನಿರೀಕ್ಷೆಮಾಡಬೇಡಿರಿ. ನಿವೇಶನ ಖರೀದಿಯ ಬಗ್ಗೆ ಮುಂದುವರೆಯುವುದು ಒಳ್ಳೆಯದು. ವೃತ್ತಿಯಲ್ಲಿ ಯಾವುದೇ ವಾದ ವಿವಾದ ಗಳಾದರೂ ಏನು ತೊಂದರೆ ಇಲ್ಲ. ಸಾಹಿತಿಗಳಿಗೆ ಉತ್ತಮವಾದ ಗೌರವ ದೊರೆಯುವ ಸಂದರ್ಭವಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಗತಿಯನ್ನು ಕಾಣುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯ ಗತಿ ಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಇಚ್ಚಿತ ಫಲಿತಾಂಶ ವನ್ನು ಪಡೆಯುವ ಯೋಗವಿದೆ.ಹರಿತವಾದ ಆಯುಧ ಗಳ ಜೊತೆ ಕೆಲಸ ಮಾಡುವವರು ಎಚ್ಚರದಿಂದ ಮಾಡಿರಿ. ಸಂಗಾತಿಯು ನಿಮಗೆ ಪೂರಕವಾಗಿ ನಡೆದು ಕೊಳ್ಳುತ್ತಾರೆ. ಸರ್ಕಾರಿ ಕೆಲಸ ಕಚೇರಿಯ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಅಗತ್ಯವಾದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದು ಉತ್ತಮ. ಉದ್ಯೋಗದಲ್ಲಿನ ಬದಲಾ ವಣೆಗಳು ನಿಧಾನವಾಗಬಹುದು. ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ವಕೀಲರಿಗೆ ಹೆಚ್ಚು ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ.ರಾಜಕೀಯ ಕ್ಷೇತ್ರದಲ್ಲಿರುವವರು ಅವರ ಸ್ಥಾನಮಾನಗಳಿಗಾಗಿ ವಶೀಲಿ ಮಾಡಬೇಕಾಗ ಬಹುದು. ಹಣದ ಒಳಹರಿವು ನಿರೀಕ್ಷೆಯ ಮಟ್ಟವನ್ನು ತಲುಪುತ್ತದೆ. ಬಯಸುತ್ತಿದ್ದ ಆಸ್ತಿಯನ್ನು ಕೊಂಡು ಕೊಳ್ಳಬಹುದು. ಕೃಷಿ ವಿಜ್ಞಾನಿಗಳಿಗೆ ಹೆಚ್ಚಿನ ಸಾಧನೆ ಮಾಡುವ ಯೋಗವಿದೆ. ಶೀತಬಾಧೆ ನಿಮ್ಮನ್ನು ಕಾಡ ಬಹುದು. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ಪುಸ್ತಕ ಪ್ರಕಾಶಕರಿಗೆ ಉತ್ತಮ ಪುಸ್ತಕ ಪ್ರಕಾಶನ ಮಾಡುವ ಯೋಗವಿದೆ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ದಾಂಪತ್ಯ ಜೀವನದಲ್ಲಿ ತಾಳ್ಮೆಯಿಂದ ಮುನ್ನಡೆಯುವುದು ಮುಖ್ಯ. ಎಣ್ಣೆ ಕಾಳುಗಳ ಬೆಳೆಗಾರರಿಗೆ ಉತ್ತಮ ಫಸಲು ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಪೂರಕ ವಾತಾವರಣಗಳು ದೊರೆಯುತ್ತವೆ. ಅತಿಯಾದ ಖರ್ಚು ಆರ್ಥಿಕ ಏರಿಳಿತಕ್ಕೆ ಕಾರಣವಾಗಬಹುದು. ಸಮೂಹದಲ್ಲಿ ಮಾತನಾಡುವಾಗ ಸಾಕಷ್ಟು ಎಚ್ಚರ ವಿರಲಿ.ಯಾರ ಬಗ್ಗೆಯೂ ವೈಯಕ್ತಿಕ ಟೀಕೆಗಳು ಬೇಡ. ಸಂಶೋಧನಾ ಗಾರರಿಗೆ ಉತ್ತಮ ಮಾರ್ಗದರ್ಶಕರು ದೊರೆಯುತ್ತಾರೆ. ಸಿದ್ಧ ಉಡುಪುಗಳ ಮಾರಾಟಗಾರ ರಿಗೆ ವ್ಯಾಪಾರ ಹೆಚ್ಚುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ರುವವರಿಗೆ ಹೆಚ್ಚಿನ ಆದಾಯದ ಜೊತೆ ಹೆಸರು ಸಹ ಬರುತ್ತದೆ. ಬಂಧುಗಳ ಸಂಬಂಧಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು. .ಕೃಷಿಕರಿಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಮನಸ್ಸು ಹರಿಯುತ್ತದೆ.