ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
14/05/2023 - 20/05/2023
ವಾರ ಭವಿಷ್ಯ | ಮೇ 21, ಭಾನುವಾರದಿಂದ ಮೇ 27 ಶನಿವಾರದವರೆಗೆ
Published 20 ಮೇ 2023, 18:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನೂತನ ವ್ಯವಹಾರವನ್ನು ಆರಂಭಿಸುವ ಯೋಚನೆ ಯಲ್ಲಿರುವವರು ಅದರ ಸಾಧಕ ಬಾದಕಗಳನ್ನು ಸರಿ ಯಾಗಿ ತಿಳಿಯಿರಿ.ಹಣ್ಣಿನ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಿರುತ್ತದೆ. ಆಸ್ತಿ ಮಾರಾಟಗಳಿಂದ ಉತ್ತಮ ಲಾಭ ಪಡೆಯುವಿರಿ. ಕಷ್ಟಕಾಲದಲ್ಲಿ ಆಪ್ತರ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಮುಂದಿನ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಖಾದಿ ಉದ್ಯಮ ದವರಿಗೆ ಸ್ವಲ್ಪಮಟ್ಟಿನ ಚೇತರಿಕೆ ಬರುತ್ತದೆ. ಬಂಧುಗಳ ಶುಭ ಸಮಾರಂಭಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ. ಧನಾದಾಯವು ನಿರೀಕ್ಷೆಯ ಮಟ್ಟವನ್ನು ತಲುಪುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ದೊರೆಯುವ ಕಾಲ, ವಿದೇಶದಲ್ಲಿ ಓದುತ್ತಿರುವವರಿಗೆ ಪಾರ್ಟ್ಟೈಮ್ ಕೆಲಸ ದೊರೆಯುತ್ತದೆ. ತಾಯಿಯೊಂದಿಗೆ ಹಣದ ವಿಚಾರವಾಗಿ ನಿಷ್ಟೂರವಾಗುವ ಸಾಧ್ಯತೆಗಳಿವೆ.
ವೃಷಭ
ನಿಮ್ಮ ವ್ಯವಹಾರಗಳಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ತಜ್ಞರ ಬಳಿ ಸಲಹೆ ಪಡೆಯುವುದು ಉತ್ತಮ. ವಿದ್ಯುತ್ ಉಪಕರಣಗಳನ್ನು ತಯಾರಿಸುವ ವರಿಗೆ ಬೇಡಿಕೆ ಬರುತ್ತದೆ. ನಿತ್ಯಬಳಕೆಯ ಯಂತ್ರೋಪ ಕರಣಗಳು ಅಥವಾ ವಾಹನಗಳು ರಿಪೇರಿಗೆ ಬರುವ ಸಾಧ್ಯತೆಗಳಿವೆ.  ಧನಾದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಗಂಭೀರ ಹಂತದಲ್ಲಿರುವ ನಿಮ್ಮ ಪಾಲುದಾರಿಕೆ ವ್ಯವಹಾರಗಳನ್ನು ಸರಿಪಡಿಸಿಕೊಳ್ಳಿರಿ. ಉದ್ಯಮಿಗಳು ಕಾರ್ಮಿಕರ ಸಂಬಂಧಗಳನ್ನು ಸರಿ ಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರುಗಳಾದರು ತೊಂದರೆ ಇಲ್ಲ. ಹೊಸದೊಂದು  ಕಾರ್ಯದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ದಿನಬಳಕೆ ವಸ್ತುಗಳ ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರ ವಿರುತ್ತದೆ.
ಮಿಥುನ
ಸಹಾಯ ಸಿಗುವುದೆಂಬ ನಂಬಿಕೆಯಲ್ಲಿ ನಿಮ್ಮಅಂತರಾಳವನ್ನು ಇತರರ ಮುಂದೆ ತೋಡಿಕೊಳ್ಳ ಬೇಡಿರಿ. ಮಿಶ್ರ ಲೋಹಗಳ ವ್ಯಾಪಾರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಮಿತ್ರವರ್ಗದವರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ.ಗುಡಿ ಗಾರಿಕೆಯನ್ನು ಮಾಡುವವರಿಗೆ ಬೇಡಿಕೆ ಬಂದು ಹೆಚ್ಚು ಸಂಪಾದನೆಯಾಗುತ್ತದೆ.ಆರಕ್ಷಕರ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಹಣದ ಒಳಹರಿವು ಮಂದಗತಿಯ ಲ್ಲಿರುತ್ತದೆ. ಬಾಯಿ ಹುಣ್ಣಿನ ಸಮಸ್ಯೆ ಬರಬಹುದು. ವೃತ್ತಿ  ಬದಲಾವಣೆಯ ಸಮಸ್ಯೆ ನಿವಾರಣೆಯಾಗು ವುದು. ಭೂಮಿ ಖರೀದಿಯ ವಿಚಾರಕ್ಕೆ ಈಗ ಗಮನ  ಕೊಡಬಹುದು. ನಿಮ್ಮ ಹಣಕ್ಕೆತಕ್ಕಂತೆ  ಹೊಸ ವಾಹನ ವನ್ನು ಖರೀದಿ ಮಾಡಿರಿ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವರಿಗೆ ಹೆಚ್ಚಿನ ಆದಾಯ ವಿರುತ್ತದೆ.
ಕರ್ಕಾಟಕ
ನಿಕಟವರ್ತಿಗಳಿಂದ ನೂತನ  ವ್ಯವಹಾರದ ಬಗ್ಗೆ ಪ್ರಸ್ತಾಪ ಬರಬಹುದು. ಕಾರ್ಮಿಕರೊಡನೆ ವ್ಯವ ಹರಿಸುವಾಗ ಸಂಯಮ ಬಹಳ ಅಗತ್ಯ. ಮಕ್ಕಳ  ಓದಿನ ಬಗ್ಗೆ ಹೆಚ್ಚಿನ ಗಮನಹರಿಸುವಿರಿ. ಕೃಷಿಕರಿಗೆ ಕಾಡು ಪ್ರಾಣಿಗಳಿಂದ ತೊಂದರೆ ಬರುವ ಸಾಧ್ಯತೆ ಇದೆ. ಆಹಾರ  ಶೈಲಿಯಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಚತುರತೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಕಾಗದ ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸರ್ಕಾರಿ ಉದ್ಯೋಗದಲ್ಲಿ ರುವವರಿಗೆ ಹೆಚ್ಚಿನ ಹೊಸಜವಾಬ್ದಾರಿಗಳು ಬರುತ್ತವೆ. ನಿಮ್ಮ ನಡವಳಿಕೆಯಿಂದ ಉದ್ಯೋಗದಲ್ಲಿ ಉತ್ತಮ ಹೆಸರನ್ನು ಪಡೆಯುವಿರಿ. ಹೊಸ ಭೂಮಿ ಖರೀದಿಯ ವಿಷಯ ಈಗ ಸದ್ಯಕ್ಕೆ ಬೇಡ. ಹಣದ ಒಳಹರಿವು  ಬೇಡಿಕೆಗೆ ಅನುಸಾರವಾಗಿ ಸಿಗುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಸೂಕ್ತ ಅವಕಾಶ   ದೊರೆಯುತ್ತದೆ.
ಸಿಂಹ
ಕುಟುಂಬ ವರ್ಗದಲ್ಲಿ ಸಣ್ಣ ಪುಟ್ಟ ವಿವಾದಗಳು ಬಂದರೂ ಅದನ್ನು ಮಾತಿನಿಂದ ಬಗೆಹರಿಸಿಕೊಳ್ಳಿರಿ. ತಂದೆಯಿಂದ ಆಧ್ಯಾತ್ಮಿಕ ವಿದ್ಯೆಯನ್ನು ಕಲಿಯುವ ಅವಕಾಶ ಸಿಗುತ್ತದೆ. ಇಲಾಖೆ  ಪರೀಕ್ಷೆ ಕಟ್ಟಿರುವವರಿಗೆ ಶುಭ ಸುದ್ದಿ ಇರುತ್ತದೆ. ದನದಾಯವು ಸಾಮಾನ್ಯ ಗತಿ ಯಲ್ಲಿರುತ್ತದೆ. ಸ್ನೇಹಿತರೊಂದಿಗೆ ನಡೆಸಿದ ವ್ಯವಹಾರ ಗಳಲ್ಲಿ ಲಾಭವಿರುತ್ತದೆ. ಗೃಹ ನಿರ್ಮಾಣ ಮಾಡುತ್ತಿರು ವವರಿಗೆ ಹೆಚ್ಚಿನ ಖರ್ಚುಗಳು ಬರಬಹುದು. ಮಕ್ಕಳ ಜೀವನದಲ್ಲಿ ಸಂತಸದ ಕ್ಷಣಗಳನ್ನು ಕಾಣುವ ಯೋಗವಿದೆ.ಮಕ್ಕಳಿಗಾಗಿ ಹೊಸವಸ್ತ್ರಗಳನ್ನು ಖರೀದಿ ಮಾಡುವಿರಿ. ರಾಜಕೀಯ ವ್ಯಕ್ತಿಗಳಿಗೆ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅದಿರು ವ್ಯಾಪಾರ ಮಾಡು ವವರ ಆದಾಯ ಹೆಚ್ಚುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಸುಗಂಧ ದ್ರವ್ಯಗಳನ್ನು ಮಾರುವವರ ವ್ಯಾಪಾರ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ.
ಕನ್ಯಾ
ಕ್ರಯ ವಿಕ್ರಯ ಮಾಡುವವರಿಗೆ ಉತ್ತಮ ವ್ಯವಹಾರ ನಡೆಯುತ್ತದೆ,ಎಚ್ಚರಿಕೆ ವಹಿಸಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇಂದಿನ ಪರಿಸ್ಥಿತಿಗಳತಕ್ಕಂತೆ ಹೊಸಯೋಜನೆಯನ್ನು ರೂಪಿಸುವುದು ಒಳ್ಳೆಯದು. ಮನೆಪಾಠ ಮಾಡುವವರಿಗೆ ಹೆಚ್ಚಿನ ಶಿಷ್ಯರು ದೊರಕು ವರು. ಸಂಬಂಧಿಕರ ವಲಯದಲ್ಲಿ ಹೊಸ ತಪ್ಪು ಅಭಿ ಪ್ರಾಯಗಳಿಗೆ ದಾರಿ ಮಾಡಿಕೊಡುವಿರಿ. ಮನೆಯ ಅಲಂಕಾರಗಳಿಗಾಗಿ ವಸ್ತುಗಳನ್ನು ಕೊಳ್ಳುವಿರಿ. ಧನಾ ದಾಯವು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಪರಿಶ್ರಮದಿಂದ ಹೆಚ್ಚು ಸಂಪಾ ದನೆ ಮಾಡುವ ಯೋಗವಿದೆ. ಒಂದೆಡೆ ಸಾಲ ಪಡೆದು ಕೈಸಾಲುಗಳನ್ನು ತೀರಿಸಿಕೊಳ್ಳಬಹುದು.  ಎಲ್ಲರನ್ನೂ ಹೊಂದಿಕೊಂಡಲ್ಲಿ ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಯನ್ನು ಕಾಣಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ.
ತುಲಾ
ಸರ್ಕಾರಿ ನೌಕರರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಂದರ್ಭವಿದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಆಲಸ್ಯ ನಿಮ್ಮನ್ನು ಈ ವಾರ ಕಾಡಬಹುದು.  ಇವತ್ತಿನ ಮಟ್ಟಿಗೆ ಹೆಚ್ಚಿನ ಆಲಸ್ಯತನ ಬೇಡ. ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಹಳೆಯ ವಾಹನಗಳನ್ನು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಭವಿಷ್ಯದ ಕುರಿತಾಗಿ ಸ್ವಲ್ಪ ಆಲೋಚನೆ ಮಾಡುವುದು ಉತ್ತಮ. ಕಟ್ಟಡದ ಗುತ್ತಿಗೆದಾರರಿಗೆ ಹೆಚ್ಚಿನಕೆಲಸಗಳು ದೊರೆತು  ಹೆಚ್ಚು ಸಂಪಾದನೆ ಆಗುತ್ತದೆ. ದಂತ ವೈದ್ಯರಿಗೆ ಹೆಚ್ಚಿನ ಲಾಭ ಆಗುತ್ತದೆ. ವಿದೇಶದಲ್ಲಿರುವ ಸಂಗಾತಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಧನಾದಾಯವು ಸಾಮಾನ್ಯ ವಾಗಿರುತ್ತದೆ. ಸರ್ಕಾರಿಕಚೇರಿಯ ಕೆಲಸಗಳಲ್ಲಿ ಹಿನ್ನಡೆ ಯನ್ನು ಕಾಣಬಹುದು.
ವೃಶ್ಚಿಕ
ಜನರ ಸಂಪರ್ಕದಿಂದ ಕೆಲವರಿಗೆ ರಾಜಕೀಯ ಪ್ರವೇಶದ ಯೋಗವಿದೆ.ಹಿರಿಯರ ಶಿಫಾರಸ್ಸಿನ ಮೇಲೆ ಉದ್ಯೋಗ ದೊರೆಯುವ  ಸಂದರ್ಭವಿದೆ. ಕಾರ್ಯ ಸಾಧನೆಗಾಗಿ ಹೆಚ್ಚು ಒತ್ತಡ ಮಾಡಿಕೊಂಡು ಆರೋಗ್ಯ ವ್ಯತ್ಯಾಸ ಮಾಡಿಕೊಳ್ಳಬೇಡಿರಿ. ಆರ್ಥಿಕ ಸ್ಥಿತಿಯು ಸಾಮಾನ್ಯ ಗತಿಯಲ್ಲಿರುತ್ತದೆ. ಸಾಂಬಾರು ಪದಾರ್ಥ ಗಳ ಬೆಳೆಗಾರರಿಗೆ ಉತ್ತಮ ಬೆಳೆಬರುವ ಯೋಗವಿದೆ.  ಪಾಲುದಾರರು ವ್ಯವಹಾರಗಳ ಕಾಳಜಿಯಬಗ್ಗೆ ಒಪ್ಪಿಗೆ ನೀಡುವರು. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವವರು ಎಚ್ಚರದಿಂದ ಮಾಡಿರಿ. ಆಸ್ತಿ ವಿಚಾರ ದಲ್ಲಿ ಸ್ವಲ್ಪ ಮಟ್ಟಿನ ಗೊಂದಲಗಳು ಆಗಬಹುದು. ಹಿರಿಯರ ಆಸ್ತಿಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಸಮಾಚಾರಗಳು ಕೇಳಿ ಬರುತ್ತವೆ. ವಿದ್ಯಾರ್ಥಿಗಳು   ಅಧ್ಯಯನಕ್ಕಾಗಿ ಹೆಚ್ಚು ಶ್ರಮವನ್ನು ಹಾಕಬೇಕು. ಸರ್ಕಾರಿ ಕಚೇರಿಯ ಕೆಲಸಗಳು  ಸರಾಗವಾಗಿ ಆಗುತ್ತದೆ.
ಧನು
ಬರಹಗಾರರಿಗೆ ಉತ್ತಮ ಬರವಣಿಗೆಯನ್ನು ಬರೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಸ್ವಲ್ಪ ಉದಾಸೀನವನ್ನು ತೋರುತ್ತಿದ್ದವರು ಈಗ ಹೆಚ್ಚಿನ ಶ್ರದ್ಧೆಯನ್ನು ವಹಿಸುವರು. ವಿದೇಶದಲ್ಲಿರುವವರು ಹೆಚ್ಚಿನ ವಿದ್ಯೆಯನ್ನು ಓದಲು ಅವಕಾಶ ದೊರೆಯು ತ್ತದೆ. ಆಹಾರವನ್ನು ಮಾರಾಟಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗುವ ಯೋಗವಿದೆ. ಸಹೋದ್ಯೋಗಿಗಳ ಸಹಕಾರ ದೊರೆತು ವೃತ್ತಿಯಲ್ಲಿ ಕೆಲಸ ಸರಾಗವೆನಿಸು ತ್ತದೆ. ದೈವ ಸ್ಥಳಗಳ ವೀಕ್ಷಣೆ ಮಾಡುವ ಅವಕಾಶಗಳು ದೊರೆಯುತ್ತದೆ. ಸಂಗಾತಿಗೆ ಹೆಚ್ಚಿನ ಆದಾಯ ಬರುವ ಸಂದರ್ಭವಿದೆ. ನಿಮ್ಮ ಶತ್ರುಗಳು ಯಾರೆಂದು ತಿಳಿದು ಅವರನ್ನು ಮಟ್ಟ ಹಾಕುವಿರಿ. ಕೃಷಿಗಳಿಗೆ ಸ್ವಲ್ಪ ಆದಾಯ ಕಡಿಮೆಯಾಗಬಹುದು. ಆರೋಗ್ಯಕ್ಕಾಗಿ ದೇಹದಂಡನೆ ಅಗತ್ಯ.
ಮಕರ
ಜೀವನದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗಲಿದೆ.  ನಿಮ್ಮಲ್ಲಿ ಹುದುಗಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನುತೋರಿಸಲು ಉತ್ತಮ ಅವಕಾಶ ದೊರೆಯುತ್ತದೆ. ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ನಡೆಯುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಕೃಷಿಯಿಂದ ಹೆಚ್ಚಿನ ಲಾಭವನ್ನು ರೈತರು ಕಾಣಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ವನ್ನು ಪಡೆಯುವ ಯೋಗವಿದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ಸುಗಂಧ ದ್ರವ್ಯ ಗಳನ್ನು ವ್ಯಾಪಾರ ಮಾಡುವವರಿಗೆ ಹೆಚ್ಚಿನ ವ್ಯಾಪಾರ ವಿರುತ್ತದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು  ತಯಾರಿಸುವವರಿಗೆ ಬೇಡಿಕೆ ಕಡಿಮೆಯಾಗಬಹುದು. ಕೃಷಿಕರಿಗೆಬೇಕಾದ ಸಹಾಯಧನಗಳುಒದಗಿಬರುತ್ತವೆ.  ಮುಕ್ತ ಮಾತುಕತೆಯ ಮೂಲಕ ಕಾರ್ಮಿಕರ ಸಮಸ್ಯೆ ಗಳನ್ನು ಉದ್ದಿಮೆದಾರರು ಪರಿಹರಿಸಿಕೊಳ್ಳುವುದು ಬಹಳ ಒಳ್ಳೆಯದು. 
ಕುಂಭ
ಸವಾಲಾಗಿರುವ ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಲೋಚನೆ ಮಾಡುವಿರಿ. ಯುವಕರು ಮುಂದೆ ಸಾಗಬೇಕಾದ ದಾರಿಯನ್ನು ನಿರ್ಧರಿಸಲು ಹಾಗೂ ಉದ್ಯೋಗಕ್ಕೆ ಸೇರಲು ಸೂಕ್ತ ಮಾರ್ಗದರ್ಶನ ಪಡೆಯಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಯನ್ನು ಮಾಡುವ ವೈದ್ಯರಿಗೆ ಬೇಡಿಕೆ  ಹೆಚ್ಚುತ್ತದೆ. ಮಾರಾಟ ಸಂಸ್ಥೆಗಳನ್ನು ನಡೆಸುತ್ತಿರುವವರು ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುವವರಿಗೆಮಂದಗತಿ ಇರುತ್ತದೆ. ಹಿರಿಯರು ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವರು. ಖಾದ್ಯ ತೈಲಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ.  ರಾಜಕಾರ ಣಿಗಳಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ.
ಮೀನ
ಕೆಲಸ ಕಾರ್ಯದ ಒತ್ತಡದಿಂದ  ಕುಟುಂಬದ ಕಡೆ ಗಮನ ಕಡಿಮೆಯಾಗದಿರಲಿ. ಕಚೇರಿಯಲ್ಲಿ ಬೇಸರ ತರುವಂತಹ ಘಟನೆಗಳು ನಡೆಯಬಹುದು. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಬರಬಹುದು. ಹೂಡಿಕೆ ವಿಚಾರದಲ್ಲಿ ಎಚ್ಚರ ವಹಿಸಿರಿ, ಹೂಡಿಕೆ ಹಣ  ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಪಾಲುದಾರಿಕೆಯ  ವ್ಯವಹಾರಗಳಲ್ಲಿ ಬಹಳಯಶಸ್ಸು ಇರುವುದಿಲ್ಲ.ಬಂದ ಅವಕಾಶಗಳನ್ನು ಸರಿಯಾಗಿಬಳಸಿಕೊಳ್ಳುವುದು ಈಗ ಬಹಳ ಮುಖ್ಯ. ಬೇರೆಯವರ ಬಗ್ಗೆ  ಅಸಹನೆಯನ್ನು  ತೋರಿದಲ್ಲಿ  ನಿಮಗೆ ತೊಂದರೆ ಬರಬಹುದು.  ಕೃಷಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯ ಹೆಚ್ಚಾಗುತ್ತದೆ.  ಉಸಿರಾಟದ ತೊಂದರೆ ಅಥವಾ ಕಣ್ಣಿನತೊಂದರೆ ಇರುವವರು ಎಷ್ಟು ಎಚ್ಚರ ವಹಿಸಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯದ ಸಾಧ್ಯತೆ ಇದೆ.