<p>ಅಪಘಾತದಲ್ಲಿ ಗಾಯಗೊಂಡು ಗೋಪಾಲಿ ಹಾಸಿಗೆ ಹಿಡಿದಿದ್ದ. ಬ್ರೆಡ್ಡು, ಬಾಳೆಹಣ್ಣು ತಗೊಂಡು ಶಂಕ್ರಿ, ಸುಮಿ ಆರೋಗ್ಯ ವಿಚಾರಿಸಲು ಬಂದಿದ್ದರು.</p>.<p>‘ಅಪಘಾತ ಹೇಗಾಯ್ತೋ ಗೋಪಾಲಿ?’ ಶಂಕ್ರಿ ಕೇಳಿದ.</p>.<p>‘ಅವರನ್ನು ಕೇಳಬೇಡಿ, ಬಂದವರಿಗೆಲ್ಲಾ ಅಪಘಾತದ ವಿವರ ಹೇಳಿ ಹೇಳಿ ಅವರಿಗೆ ‘ಉಪಘಾತ’ವಾಗಿದೆ. ನಾನು ಹೇಳಿತೀನಿ, ಬೈಕಿನಲ್ಲಿ ಬರುತ್ತಿದ್ದಾಗ ಬೀದಿನಾಯಿ ಅಟ್ಟಿಸಿಕೊಂಡು ಬಂತಂತೆ, ಗಾಬರಿಯಾಗಿ ರಸ್ತೆ ಗುಂಡಿಗೆ ಬಿದ್ದು ಹೀಗೆ ಮಾಡಿಕೊಂಡಿದ್ದಾರೆ...’ ಗೋಪಾಲಿ ಹೆಂಡ್ತಿ ವೈಶಾಲಿ ಕಣ್ಣು ಒರೆಸಿಕೊಂಡಳು.</p>.<p>‘ರಸ್ತೆ ಗುಂಡಿ, ಬೀದಿನಾಯಿ ಎರಡೂ ಅಪಘಾತಕಾರಿಗಳೇ, ಗುಂಡಿ ಮುಚ್ಚಬಹುದು. ನಾಯಿಯ ಬಾಯಿ ಮುಚ್ಚಲಾಗುವುದಿಲ್ಲ’ ಸುಮಿ ಸಂಕಟಪಟ್ಟಳು.</p>.<p>‘ಹೌದು. ನಾಯಿ ನಮ್ಮನ್ನು ಕಚ್ಚುವುದು ಅಪರಾಧವಲ್ಲ, ನಾವು ನಾಯಿಯನ್ನು ಕಚ್ಚೋದು ಅಪರಾಧ ಎನ್ನುವಂತಾಗಿದೆ’ ಅಂದ ಗೋಪಾಲಿ.</p>.<p>‘ಬೀದಿನಾಯಿ ಕಾಡುಪ್ರಾಣಿಯೋ ನಾಡು ಪ್ರಾಣಿಯೊ?’</p>.<p>‘ಸದ್ಯಕ್ಕೆ ಕಾಡುವ ಪ್ರಾಣಿ. ಕಾಡಿನಲ್ಲಿ ನೆಲೆಯಿಲ್ಲ, ನಾಡಿನಲ್ಲಿ ಬೆಲೆಯಿಲ್ಲ. ಬೀದಿನಾಯಿಗಳ ಬಾಳು ತ್ರಿಶಂಕುವಾಗಿದೆ’.</p>.<p>‘ಬೀದಿನಾಯಿಗಳ ಹಾವಳಿ ತಡೆಯಲು ಸರ್ಕಾರ ನಾಯಿ ನೀತಿ ರೂಪಿಸಬೇಕು. ಆಶ್ರಯ ಕೇಂದ್ರಗಳಲ್ಲಿ ಬೀದಿನಾಯಿಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಕೋರ್ಟ್ ಹೇಳಿದೆ’.</p>.<p>‘ಬೀದಿನಾಯಿಗಳ ಸಂತತಿ ಜಾಸ್ತಿಯಾಗ್ತಿದೆ. ಅವುಗಳಿಗೂ ಕುಟುಂಬ ಕಲ್ಯಾಣ ನೀತಿ ಜಾರಿ ಮಾಡಬೇಕು, ಆರತಿಗೊಂದು ಮರಿ, ಕೀರುತಿಗೊಂದು ಮರಿ ಸಾಕು ಎಂದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕಂತೆ’.</p>.<p>‘ಬೀದಿನಾಯಿಗಳಿಗೆ ಉದ್ಯೋಗ ಕೊಟ್ಟರೆ ಕಾಯಕ ಮಾಡಿಕೊಂಡು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳುತ್ತವೆ’.</p>.<p>‘ಎಜುಕೇಷನ್ ಇಲ್ಲ, ಲಾಂಗ್ವೇಜ್ ಗೊತ್ತಿಲ್ಲದ ಬೀದಿನಾಯಿಗಳು ಯಾವ ಉದ್ಯೋಗ ಮಾಡುತ್ತವೆ?’</p>.<p>‘ಮನೆ, ಕಚೇರಿ, ಕಂಪನಿ, ಕಾರ್ಖಾನೆಗಳ ಕಾವಲಿಗೆ ಬೀದಿನಾಯಿಗಳನ್ನು ನೇಮಿಸಬಹುದು. ಊಟ ಕೊಟ್ಟರೆ ಸಾಕು ಸಂಬಳ-ಸಾರಿಗೆ ಕೇಳೋದಿಲ್ಲ...’</p>.<p>‘ಆದರೂ, ಬೀದಿನಾಯಿಗಳು ಬೀದಿಗೆ ಬಾರದಂತೆ ತಡೆಯೋದು ಅನ್ಯಾಯ ಅಲ್ವಾ?’ ಗೋಪಾಲಿ ನರಳುತ್ತಾ ಮಗ್ಗುಲಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಪಘಾತದಲ್ಲಿ ಗಾಯಗೊಂಡು ಗೋಪಾಲಿ ಹಾಸಿಗೆ ಹಿಡಿದಿದ್ದ. ಬ್ರೆಡ್ಡು, ಬಾಳೆಹಣ್ಣು ತಗೊಂಡು ಶಂಕ್ರಿ, ಸುಮಿ ಆರೋಗ್ಯ ವಿಚಾರಿಸಲು ಬಂದಿದ್ದರು.</p>.<p>‘ಅಪಘಾತ ಹೇಗಾಯ್ತೋ ಗೋಪಾಲಿ?’ ಶಂಕ್ರಿ ಕೇಳಿದ.</p>.<p>‘ಅವರನ್ನು ಕೇಳಬೇಡಿ, ಬಂದವರಿಗೆಲ್ಲಾ ಅಪಘಾತದ ವಿವರ ಹೇಳಿ ಹೇಳಿ ಅವರಿಗೆ ‘ಉಪಘಾತ’ವಾಗಿದೆ. ನಾನು ಹೇಳಿತೀನಿ, ಬೈಕಿನಲ್ಲಿ ಬರುತ್ತಿದ್ದಾಗ ಬೀದಿನಾಯಿ ಅಟ್ಟಿಸಿಕೊಂಡು ಬಂತಂತೆ, ಗಾಬರಿಯಾಗಿ ರಸ್ತೆ ಗುಂಡಿಗೆ ಬಿದ್ದು ಹೀಗೆ ಮಾಡಿಕೊಂಡಿದ್ದಾರೆ...’ ಗೋಪಾಲಿ ಹೆಂಡ್ತಿ ವೈಶಾಲಿ ಕಣ್ಣು ಒರೆಸಿಕೊಂಡಳು.</p>.<p>‘ರಸ್ತೆ ಗುಂಡಿ, ಬೀದಿನಾಯಿ ಎರಡೂ ಅಪಘಾತಕಾರಿಗಳೇ, ಗುಂಡಿ ಮುಚ್ಚಬಹುದು. ನಾಯಿಯ ಬಾಯಿ ಮುಚ್ಚಲಾಗುವುದಿಲ್ಲ’ ಸುಮಿ ಸಂಕಟಪಟ್ಟಳು.</p>.<p>‘ಹೌದು. ನಾಯಿ ನಮ್ಮನ್ನು ಕಚ್ಚುವುದು ಅಪರಾಧವಲ್ಲ, ನಾವು ನಾಯಿಯನ್ನು ಕಚ್ಚೋದು ಅಪರಾಧ ಎನ್ನುವಂತಾಗಿದೆ’ ಅಂದ ಗೋಪಾಲಿ.</p>.<p>‘ಬೀದಿನಾಯಿ ಕಾಡುಪ್ರಾಣಿಯೋ ನಾಡು ಪ್ರಾಣಿಯೊ?’</p>.<p>‘ಸದ್ಯಕ್ಕೆ ಕಾಡುವ ಪ್ರಾಣಿ. ಕಾಡಿನಲ್ಲಿ ನೆಲೆಯಿಲ್ಲ, ನಾಡಿನಲ್ಲಿ ಬೆಲೆಯಿಲ್ಲ. ಬೀದಿನಾಯಿಗಳ ಬಾಳು ತ್ರಿಶಂಕುವಾಗಿದೆ’.</p>.<p>‘ಬೀದಿನಾಯಿಗಳ ಹಾವಳಿ ತಡೆಯಲು ಸರ್ಕಾರ ನಾಯಿ ನೀತಿ ರೂಪಿಸಬೇಕು. ಆಶ್ರಯ ಕೇಂದ್ರಗಳಲ್ಲಿ ಬೀದಿನಾಯಿಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಕೋರ್ಟ್ ಹೇಳಿದೆ’.</p>.<p>‘ಬೀದಿನಾಯಿಗಳ ಸಂತತಿ ಜಾಸ್ತಿಯಾಗ್ತಿದೆ. ಅವುಗಳಿಗೂ ಕುಟುಂಬ ಕಲ್ಯಾಣ ನೀತಿ ಜಾರಿ ಮಾಡಬೇಕು, ಆರತಿಗೊಂದು ಮರಿ, ಕೀರುತಿಗೊಂದು ಮರಿ ಸಾಕು ಎಂದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕಂತೆ’.</p>.<p>‘ಬೀದಿನಾಯಿಗಳಿಗೆ ಉದ್ಯೋಗ ಕೊಟ್ಟರೆ ಕಾಯಕ ಮಾಡಿಕೊಂಡು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳುತ್ತವೆ’.</p>.<p>‘ಎಜುಕೇಷನ್ ಇಲ್ಲ, ಲಾಂಗ್ವೇಜ್ ಗೊತ್ತಿಲ್ಲದ ಬೀದಿನಾಯಿಗಳು ಯಾವ ಉದ್ಯೋಗ ಮಾಡುತ್ತವೆ?’</p>.<p>‘ಮನೆ, ಕಚೇರಿ, ಕಂಪನಿ, ಕಾರ್ಖಾನೆಗಳ ಕಾವಲಿಗೆ ಬೀದಿನಾಯಿಗಳನ್ನು ನೇಮಿಸಬಹುದು. ಊಟ ಕೊಟ್ಟರೆ ಸಾಕು ಸಂಬಳ-ಸಾರಿಗೆ ಕೇಳೋದಿಲ್ಲ...’</p>.<p>‘ಆದರೂ, ಬೀದಿನಾಯಿಗಳು ಬೀದಿಗೆ ಬಾರದಂತೆ ತಡೆಯೋದು ಅನ್ಯಾಯ ಅಲ್ವಾ?’ ಗೋಪಾಲಿ ನರಳುತ್ತಾ ಮಗ್ಗುಲಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>