<p><strong>ಚೆನ್ನೈ</strong>: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಧಿಕಾರದ ಗದ್ದುಗೆಗೆ ಸನಿಹವಾಗಿದೆ. ಇದರೊಂದಿಗೆ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಿಜಯ ಅವರು ನೀಡಿದ್ದ ಭರವಸೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿವೆ.</p> <p>ವಿವಾಹವಾಗುವವರಿಗೆ 8 ಗ್ರಾಂ ಚಿನ್ನ ವಿತರಣೆ ಸೇರಿದಂತೆ ಭರಪೂರ ಘೋಷಣೆಗಳು ಕೂಡಾ ವಿಜಯ್ ಗೆಲುವಿಗೆ ಪ್ರಮುಖ ಕಾರಣವಾಗಿರಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ವಿಜಯ್ ಅಧಿಕಾರಕ್ಕೇರಿದರೆ ಎಲ್ಲ ಭರವಸೆಗಳನ್ನು ಈಡೇರಿಸುವರೇ ಎಂಬ ಲೆಕ್ಕಚಾರ ಮತದಾರರದ್ದಾಗಿದೆ.</p>.<p>60 ವಯೋಮಾನದ ಒಳಗಿನ ಮಹಿಳೆಯರಿಗೆ ಮಾಸಿಕ ₹2,500, ಬಡ ವಧುಗಳಿಗೆ 8 ಗ್ರಾಂ ಚಿನ್ನದ ಜೊತೆ ರೇಷ್ಮೆ ಸೀರೆ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ ಆರು ಸಿಲಿಂಡರ್ ನೀಡುವುದಾಗಿ ವಿಜಯ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.</p>.<p>ಮಹಿಳೆಯರು ನಡೆಸುವ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ ವಿತರಣೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಾಯಿ ಅಥವಾ ಪೋಷಕರಿಗೆ ವರ್ಷಕ್ಕೆ ₹15 ಸಾವಿರ ನೀಡುವುದಾಗಿ ವಿಜಯ್ ಹೇಳಿದ್ದರು.</p>.<p>ಆಸ್ಪತ್ರೆಗಳ ಆಧುನೀಕರಣ, ₹25 ಲಕ್ಷ ಮೊತ್ತದ ಕುಟುಂಬ ಆರೋಗ್ಯ ವಿಮಾ ಯೋಜನೆ ಪರಿಚಯಿಸಲಾಗುವುದು. ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ ₹3 ಸಾವಿರ ಪಿಂಚಣಿ, 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು.</p>.<p>ಇನ್ನೂ ಹಲವು ಭರವಸೆಗಳನ್ನು ವಿಜಯ್ ನೀಡಿದ್ದು, ಅಧಿಕಾರಕ್ಕೇರಿದ ಬಳಿಕ ಈ ಭರವಸೆಗಳು ಅನುಷ್ಠಾನಗೊಳ್ಳಬಹುದೇ ಎನ್ನುವುದನ್ನು ಮತದಾರರು ಎದುರು ನೋಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಧಿಕಾರದ ಗದ್ದುಗೆಗೆ ಸನಿಹವಾಗಿದೆ. ಇದರೊಂದಿಗೆ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಿಜಯ ಅವರು ನೀಡಿದ್ದ ಭರವಸೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿವೆ.</p> <p>ವಿವಾಹವಾಗುವವರಿಗೆ 8 ಗ್ರಾಂ ಚಿನ್ನ ವಿತರಣೆ ಸೇರಿದಂತೆ ಭರಪೂರ ಘೋಷಣೆಗಳು ಕೂಡಾ ವಿಜಯ್ ಗೆಲುವಿಗೆ ಪ್ರಮುಖ ಕಾರಣವಾಗಿರಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ವಿಜಯ್ ಅಧಿಕಾರಕ್ಕೇರಿದರೆ ಎಲ್ಲ ಭರವಸೆಗಳನ್ನು ಈಡೇರಿಸುವರೇ ಎಂಬ ಲೆಕ್ಕಚಾರ ಮತದಾರರದ್ದಾಗಿದೆ.</p>.<p>60 ವಯೋಮಾನದ ಒಳಗಿನ ಮಹಿಳೆಯರಿಗೆ ಮಾಸಿಕ ₹2,500, ಬಡ ವಧುಗಳಿಗೆ 8 ಗ್ರಾಂ ಚಿನ್ನದ ಜೊತೆ ರೇಷ್ಮೆ ಸೀರೆ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ ಆರು ಸಿಲಿಂಡರ್ ನೀಡುವುದಾಗಿ ವಿಜಯ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.</p>.<p>ಮಹಿಳೆಯರು ನಡೆಸುವ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ ವಿತರಣೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಾಯಿ ಅಥವಾ ಪೋಷಕರಿಗೆ ವರ್ಷಕ್ಕೆ ₹15 ಸಾವಿರ ನೀಡುವುದಾಗಿ ವಿಜಯ್ ಹೇಳಿದ್ದರು.</p>.<p>ಆಸ್ಪತ್ರೆಗಳ ಆಧುನೀಕರಣ, ₹25 ಲಕ್ಷ ಮೊತ್ತದ ಕುಟುಂಬ ಆರೋಗ್ಯ ವಿಮಾ ಯೋಜನೆ ಪರಿಚಯಿಸಲಾಗುವುದು. ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ ₹3 ಸಾವಿರ ಪಿಂಚಣಿ, 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು.</p>.<p>ಇನ್ನೂ ಹಲವು ಭರವಸೆಗಳನ್ನು ವಿಜಯ್ ನೀಡಿದ್ದು, ಅಧಿಕಾರಕ್ಕೇರಿದ ಬಳಿಕ ಈ ಭರವಸೆಗಳು ಅನುಷ್ಠಾನಗೊಳ್ಳಬಹುದೇ ಎನ್ನುವುದನ್ನು ಮತದಾರರು ಎದುರು ನೋಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>