<p><strong>ನವದೆಹಲಿ</strong>: ಎಡಪಂಥೀಯ ಉಗ್ರವಾದದಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಪ್ರಯತ್ನಗಳ ಕುರಿತು ಲೋಕಸಭೆಯಲ್ಲಿ ಸೋಮವಾರ ಚರ್ಚೆ ನಡೆಯಲಿದೆ. ಲೋಕಸಭೆ ಸಚಿವಾಲಯವು ಈ ವಿಷಯವನ್ನು ಚರ್ಚೆಗೆ ಪಟ್ಟಿ ಮಾಡಿದೆ. </p>.<p>ಭಾರತವನ್ನು ನಕ್ಸಲ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರ್ಕಾರವು ನೀಡಿದ್ದ ಗಡುವು ಮಾರ್ಚ್ 31ರಂದು ಮುಗಿಯಲಿದೆ. ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು. </p>.<p>ಟಿಡಿಪಿ ಸಂಸದ ಬೈರೆಡ್ಡಿ ಶಬರಿ ಹಾಗೂ ಶಿವಸೇನಾ ಸಂಸದ ಶ್ರೀಕಾಂತ ಶಿಂಧೆ ಅವರು ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ. </p>.<p class="title">ಎಡಪಂಥೀಯ ಉಗ್ರವಾದವಿರುವ ದೇಶದ ಜಿಲ್ಲೆಗಳ ಸಂಖ್ಯೆಯು ಎಂಟರಿಂದ ಏಳಕ್ಕೆ ಇಳಿಕೆಯಾಗಿದೆ. </p>.<p>2004ರಿಂದ ಈ ವರ್ಷ ಮಾರ್ಚ್ 26ರವರೆಗೆ ದೇಶದಲ್ಲಿ ಒಟ್ಟು 16,496 ನಕ್ಸಲರು ಶರಣಾಗಿದ್ದಾರೆ. ಕಳೆದ ವರ್ಷ ಗರಿಷ್ಠ 2,337 ನಕ್ಸಲರು ಶರಣಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಎಡಪಂಥೀಯ ಉಗ್ರವಾದದಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಪ್ರಯತ್ನಗಳ ಕುರಿತು ಲೋಕಸಭೆಯಲ್ಲಿ ಸೋಮವಾರ ಚರ್ಚೆ ನಡೆಯಲಿದೆ. ಲೋಕಸಭೆ ಸಚಿವಾಲಯವು ಈ ವಿಷಯವನ್ನು ಚರ್ಚೆಗೆ ಪಟ್ಟಿ ಮಾಡಿದೆ. </p>.<p>ಭಾರತವನ್ನು ನಕ್ಸಲ್ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರ್ಕಾರವು ನೀಡಿದ್ದ ಗಡುವು ಮಾರ್ಚ್ 31ರಂದು ಮುಗಿಯಲಿದೆ. ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು. </p>.<p>ಟಿಡಿಪಿ ಸಂಸದ ಬೈರೆಡ್ಡಿ ಶಬರಿ ಹಾಗೂ ಶಿವಸೇನಾ ಸಂಸದ ಶ್ರೀಕಾಂತ ಶಿಂಧೆ ಅವರು ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ. </p>.<p class="title">ಎಡಪಂಥೀಯ ಉಗ್ರವಾದವಿರುವ ದೇಶದ ಜಿಲ್ಲೆಗಳ ಸಂಖ್ಯೆಯು ಎಂಟರಿಂದ ಏಳಕ್ಕೆ ಇಳಿಕೆಯಾಗಿದೆ. </p>.<p>2004ರಿಂದ ಈ ವರ್ಷ ಮಾರ್ಚ್ 26ರವರೆಗೆ ದೇಶದಲ್ಲಿ ಒಟ್ಟು 16,496 ನಕ್ಸಲರು ಶರಣಾಗಿದ್ದಾರೆ. ಕಳೆದ ವರ್ಷ ಗರಿಷ್ಠ 2,337 ನಕ್ಸಲರು ಶರಣಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>