ಮಹಾರಾಷ್ಟ್ರ ಜಿಲ್ಲೆಯ ಅಮರಾವತಿ ಜಿಲ್ಲೆಯಲ್ಲಿ 60 ಮಂದಿ ವಕೀಲರಿಗೆ ಕೋವಿಡ್ 19 ದೃಢಪಟ್ಟಿರುವ ಪ್ರಕರಣ ಉಲ್ಲೇಖಿಸಿದ ನ್ಯಾಯಮೂರ್ತಿ ಶಿಂಧೆ,‘ನಾವು (ನ್ಯಾಯಾಧೀಶರು) ಸ್ವಲ್ಪ ದೂರದಲ್ಲಿ ಕುಳಿತಿದ್ದೇವೆ. ಎಸ್ಒಪಿ ಮತ್ತು ಅಂತರ ಪಾಲನೆಯು ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಮಾಡಿರುವುದಾಗಿದೆ. ಅದನ್ನು ಸರಿಯಾಗಿ ಪಾಲಿಸಿ’ ಎಂದು ಸೂಚಿಸಿದರು.