ಶ್ರೀನಗರ: ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಿದ ಆರೋಪದಲ್ಲಿ ಜಮ್ಮು–ಕಾಶ್ಮೀರ ಆಡಳಿತವು 11 ನೌಕರರನ್ನು ವಜಾಗೊಳಿಸಿದೆ. ಇದರಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಮಗ ಮತ್ತು ಪೊಲೀಸ್ ಇಲಾಖೆಯ ಇಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಜಾಗೊಂಡವರಲ್ಲಿ ಜಮ್ಮು–ಕಾಶ್ಮೀರ ಪೊಲೀಸ್, ಶಿಕ್ಷಣ, ಕೃಷಿ, ಕೌಶಲಾಭಿವೃದ್ಧಿ, ವಿದ್ಯುತ್, ಆರೋಗ್ಯ ಮತ್ತು ಶೇರ್–ಇ–ಕಾಶ್ಮೀರ್ ಇನ್ಸ್ಟಿಟ್ಯೂಟ್ನ ಆಫ್ ಮೆಡಿಕಲ್ ಸೈನ್ಸಸ್ನ (ಎಸ್ಕೆಐಎಂಎಸ್) ನೌಕರರು ಇದ್ದಾರೆ.
ಈ ಪೈಕಿ, ನಾಲ್ವರು ಅನಂತ್ನಾಗ್, ಮೂವರು ಬುದ್ಗಾಂ, ಬಾರಾಮುಲ್ಲಾ, ಶ್ರೀಗನಗರ, ಪುಲ್ವಾಮಾ ಮತ್ತು ಕುಪ್ವಾರಾದ ತಲಾ ಒಬ್ಬರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಿಚಾರಣೆಯಿಲ್ಲದೇ ಇವರನ್ನು ವಜಾಗೊಳಿಸಲಾಗಿದೆ. ಇವರು ಹೈಕೋರ್ಟ್ನಲ್ಲಿ ಮಾತ್ರವೇ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.