ಹರಾಜಿನಲ್ಲಿ ಮರದ ತುಂಡುಗಳನ್ನು ಖರೀದಿ ಮಾಡಿದ ಅಜನೀಶ್ ಕುಮಾರ್ ಅವರು ಕೂಡ ತಾವು ಬಿಡ್ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು, ಮರದ ದಿಮ್ಮಿಗಳನ್ನು ನಿಲಂಬೂರಿನಿಂದ ತಿರುವನಂತಪುರಕ್ಕೆ ಸಾಗಿಸಲು ₹ 15,000 ಖರ್ಚು ಮಾಡಿದ್ದಾಗಿ ಹೇಳಿದ್ದಾರೆ.