‘ವಿಜಾಗ್ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಮಾವೋವಾದಿಗಳ ಒತ್ತಡದ ಮೇರೆಗೆ ಅವರ ಪರ ಕೃತ್ಯಗಳಲ್ಲಿ ನಿರತರಾಗಿದ್ದೆವು ಎಂದು ಶರಣಾದವರು ಹೇಳಿದ್ದಾರೆ. ಜನರೂ ಸ್ವ ಇಚ್ಛೆಯಿಂದ ಮಾವೋವಾದಿಗಳ ಪರ ಕೆಲಸ ಮಾಡುತ್ತಿಲ್ಲ. ಕೊಲೆ ಬೆದರಿಕೆಗಳ ಪರಿಣಾಮ ಮಾವೋವಾದಿಗಳ ಪರ ಚಟುವಟಿಕೆಗಳನ್ನು ನಡೆಸುತ್ತಾರೆ. ಈ ಗ್ರಾಮಗಳು ಹಿಂದಿನಿಂದಲೂ ಮಾವೋವಾದಿಗಳ ಭದ್ರ ಕೋಟೆಯಾಗಿವೆ. ಹೀಗಾಗಿ, ಈ ಪ್ರದೇಶಗಳಿಂದಲೇ ನಕ್ಸಲರು ಶರಣಾಗಿರುವುದು ಚಿಂಟಪಲ್ಲಿ ಉಪ ವಿಭಾಗದಲ್ಲಿ ಮಾವೋವಾದಿಗಳ ಬಲ ಕಡಿಮೆಯಾಗುತ್ತಿರುವುದರ ಸೂಚನೆಯಾಗಿದೆ ಎಂದು ನಾಯ್ಡು ಹೇಳಿದ್ದಾರೆ.