ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಾಖಪಟ್ಟಣ: ಆಂಧ್ರ ಪೊಲೀಸರಿಗೆ ಶರಣಾದ 12 ನಕ್ಸಲರು

Last Updated 6 ಡಿಸೆಂಬರ್ 2020, 7:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಲ್ಲಿನ ಚಿಂಟಪಲ್ಲಿ ಪ್ರದೇಶದಲ್ಲಿ 12 ನಕ್ಸಲರು ಆಂಧ್ರ ಪ್ರದೇಶ ಪೊಲೀಸರಿಗೆ ಶರಣಾಗಿದ್ದಾರೆ.

ನಕ್ಸಲರು ಚಿಂಟಪಲ್ಲಿ ಎಎಸ್‌ಪಿ ವಿದ್ಯಾ ಸಾಗರ್ ನಾಯ್ಡು ಅವರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಇವರು ಗಾಲಿಕೊಂಡ, ಪನಸಲಬಂದ, ಅಕುಲೂರು ಮತ್ತು ರಾಮಗಡ್ಡ ಗ್ರಾಮಗಳಿಗೆ ಸೇರಿದವರು ಎನ್ನಲಾಗಿದೆ.

‘ಜನರನ್ನು ಮಾಹಿತಿದಾರರೆಂದು ಶಂಕಿಸುವುದು ಮತ್ತು ಮತ್ತು ಊಹಾಪೋಹಗಳ ಆಧಾರದ ಮೇಲೆ ಜನರನ್ನು ಹತ್ಯೆ ಮಾಡುವ ಅನಾಗರಿಕ ಕೃತ್ಯಗಳಿಂದ ಇವರು ಬೇಸರಗೊಂಡಿದ್ದರು’ ಎಂದು ಶರಣಾದವರ ಕುರಿತು ನಾಯ್ಡು ಅವರು ಮಾಹಿತಿ ನೀಡಿದ್ದಾರೆ.

‘ವಿಜಾಗ್‌ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಮಾವೋವಾದಿಗಳ ಒತ್ತಡದ ಮೇರೆಗೆ ಅವರ ಪರ ಕೃತ್ಯಗಳಲ್ಲಿ ನಿರತರಾಗಿದ್ದೆವು ಎಂದು ಶರಣಾದವರು ಹೇಳಿದ್ದಾರೆ. ಜನರೂ ಸ್ವ ಇಚ್ಛೆಯಿಂದ ಮಾವೋವಾದಿಗಳ ಪರ ಕೆಲಸ ಮಾಡುತ್ತಿಲ್ಲ. ಕೊಲೆ ಬೆದರಿಕೆಗಳ ಪರಿಣಾಮ ಮಾವೋವಾದಿಗಳ ಪರ ಚಟುವಟಿಕೆಗಳನ್ನು ನಡೆಸುತ್ತಾರೆ. ಈ ಗ್ರಾಮಗಳು ಹಿಂದಿನಿಂದಲೂ ಮಾವೋವಾದಿಗಳ ಭದ್ರ ಕೋಟೆಯಾಗಿವೆ. ಹೀಗಾಗಿ, ಈ ಪ್ರದೇಶಗಳಿಂದಲೇ ನಕ್ಸಲರು ಶರಣಾಗಿರುವುದು ಚಿಂಟಪಲ್ಲಿ ಉಪ ವಿಭಾಗದಲ್ಲಿ ಮಾವೋವಾದಿಗಳ ಬಲ ಕಡಿಮೆಯಾಗುತ್ತಿರುವುದರ ಸೂಚನೆಯಾಗಿದೆ ಎಂದು ನಾಯ್ಡು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT