‘ಈ ಮೊದಲು ಉತ್ತರ ಗುಜರಾತ್ನಲ್ಲಿ ಬಾಲಕಾರ್ಮಿಕರ ಸಂಖ್ಯೆ ಅಧಿಕವಾಗಿತ್ತು. ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಬೀಜೋತ್ಪಾದನೆ ಕಂಪನಿಗಳ ವಿರುದ್ಧ 10 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿತು. ಹೀಗಾಗಿ ಹತ್ತಿ ಬೀಜೋತ್ಪಾದನೆಯ ಕಂಪನಿಗಳು ಬುಡಕಟ್ಟು ಜನರೇ ಹೆಚ್ಚಾಗಿರುವ ಬಾನಸ್ಕಂಠ, ಸಬರ್ಕಂಠ, ಅರ್ವಲ್ಲಿ, ಮಹಿಸಾಗರ್ ಹಾಗೂ ಛೋಟಾ ಉದೇಪುರ ಜಿಲ್ಲೆಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಸ್ಥಳಾಂತರಿಸಿದವು’ ಎಂದೂ ವಿವರಿಸಿದರು.