ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಇಂಡಿಯನ್ ಆಯಿಲ್ನ ಎರಡು ಘಟಕಗಳು ಪಾಣಿಪತ್ನಲ್ಲಿ ಅತಿಶೀಘ್ರದಲ್ಲೇ ಆರಂಭವಾಗಲಿವೆ. ಒಂದರಲ್ಲಿ ನಿತ್ಯ 1 ಲಕ್ಷ ಲೀಟರ್ನಷ್ಟು ಎಥೆನಾಲ್ ಅನ್ನು ಉತ್ಪಾದನೆಯಾಗಲಿದೆ. ಮತ್ತೊಂದರಲ್ಲಿ ಭತ್ತದ ತ್ಯಾಜ್ಯದಿಂದ ತಯಾರಿಸುವ ಬಯೋ–ಬಿಟುಮೆನ್ ಅನ್ನುಪ್ರತಿದಿನ 150 ಟನ್ನಷ್ಟು ಉತ್ಪಾದಿಸಲಾಗುವುದು. ಇದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಭತ್ತ ಬೆಳೆಯುವ ದೇಶದ ವಿವಿಧ ಭಾಗಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇನ್ನು ಮುಂದೆ ಭತ್ತದ ತ್ಯಾಜ್ಯವನ್ನು ಎಥೆನಾಲ್ ಹಾಗೂ ಬಯೋ ಬಿಟುಮೆನ್ ಉತ್ಪಾದನೆಗೆ ಬಳಸಲಾಗುತ್ತದೆ ಎಂದಿದ್ದಾರೆ.