ಬದೌನ್ ಜಿಲ್ಲೆಯ ಉಶೈನ್ ಪ್ರದೇಶದ ಬಳಿ ಇರುವ ಅಣೆಕಟ್ಟೆ ಬಳಿ ಮಣ್ಣು ಅಗೆಯುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇಲ್ಲಿನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಸಂಕಲ್ಪ್ ಶರ್ಮಾ ಅವರು, ನಾಲ್ವರು ಬಾಲಕಿಯರು ಅಣೆಕಟ್ಟೆ ಬಳಿ ಮಣ್ಣು ಅಗೆಯಲು ಹೋಗಿದ್ದರು. ಈ ವೇಳೆ ದಿಬ್ಬದ ಒಂದು ಭಾಗ ಅವರ ಮೇಲೆ ಕುಸಿದಿದೆ. ಅವರ ಚೀರಾಟವನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.