ಅಮರಾವತಿ, ಆಂಧ್ರಪ್ರದೇಶ (ಪಿಟಿಐ): ‘ಭಾನುವಾರ ಬೆಳಿಗ್ಗೆ ವಿಜಯವಾಡದ ಮೂರು ಪಟಾಕಿ ಅಂಗಡಿಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಂಕಿ ಅನಾಹುತ ಸಂಭವಿಸಿದ ಮೂರು ಅಂಗಡಿಗಳ ಪೈಕಿ ಒಂದು ಅಂಗಡಿಯಲ್ಲಿ ಕೆಲಸಗಾರರು ಮಲಗಿದ್ದರು’ ಎಂದೂ ಅವರು ಹೇಳಿದರು.
‘ಮೂರೂ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ’ ಎಂದರು.
ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.