ತಿರುವನಂತಪುರ: ಸತತ ಐದನೇ ದಿನವೂ ಕೇರಳದಲ್ಲಿ 20,000ಕ್ಕಿಂತಲೂ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಆದರೆ ಸಾವಿನ ಸಂಖ್ಯೆ ಮತ್ತು ಪಾಸಿಟಿವಿಟಿ ದರದಲ್ಲಿ ಅಲ್ಪ ಇಳಿಕೆಯಾಗಿದೆ.
ಶನಿವಾರ 20,624 ಪ್ರಕರಣಗಳು ವರದಿಯಾಗಿದ್ದರೆ, 80 ಮಂದಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಒಂದು ದಿನದ ಅಂತರದಲ್ಲಿ ಶೇ. 13.61 ರಿಂದ ಶೇ. 12.31ಕ್ಕೆ ಇಳಿದಿದೆ.
ಶನಿವಾರ ವರದಿಯಾದ ಪ್ರಕರಣಗಳೂ ಸೇರಿದರೆ ಕೇರಳದ ಒಟ್ಟಾರೆ ಸೋಂಕಿತರ ಸಂಖ್ಯೆ33,90,761ಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರ ಸಂಖ್ಯೆ 16,781ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
24 ಗಂಟೆಗಳಲ್ಲಿ 16,865 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟು 32,08,969 ಮಂದಿ ಈ ವರೆಗೆ ಚೇತರಿಕೆ ಕಂಡಿದ್ದಾರೆ. ಸದ್ಯ ರಾಜ್ಯದಲ್ಲಿ 1,64,500 ಸಕ್ರಿಯ ಪ್ರಕರಣಗಳಿವೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಲಪ್ಪುರಂ (3,474) ತ್ರಿಶೂರ್ (2693), ಪಾಲಕ್ಕಾಡ್ (2209), ಕೋಳಿಕ್ಕೋಡ್ (2113), ಎರ್ನಾಕುಲಂ (2072), ಕೊಲ್ಲಂ (1371), ಕಣ್ಣೂರು (1243), ಆಲಪ್ಪುಳ (1120), ಕೊಟ್ಟಾಯಂ 1111) ಮತ್ತು ತಿರುವನಂತಪುರ (969) ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.