ಸಹರಾನ್ಪುರ, ಉತ್ತರ ಪ್ರದೇಶ: ಜಿಲ್ಲೆಯ ಮೊಹಂಡ್ ಗ್ರಾಮದ ಬಳಿ ಶನಿವಾರ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಸ್ಗೆ ಕಾರೊಂದು ಡಿಕ್ಕಿ ಹೊಡೆದುದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಹಾಘೂ ಇಬ್ಬರು ಗಾಯಗೊಂಡಿದ್ದಾರೆ.
ಬಸ್ನಲ್ಲಿ ಜನರು ಡೆಹ್ರಾಡೂನ್ನಲ್ಲಿ ಆಯೋಜನೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಮದುವೆ ಸಿದ್ಧತೆಗಾಗಿ ವಸ್ತುಗಳ ಖರೀದಿಗೆ ಕುಟುಂಬವು ಸಹರಾನ್ಪುರಕ್ಕೆ ತೆರಳುತ್ತಿತ್ತು.