ಚೆನ್ನೈ: ಟ್ರ್ಯಾಕ್ಟರ್ ಒಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಹಸುಳೆ ಸೇರಿ ಐವರು ಮೃತಪಟ್ಟ ಘಟನೆ ಗುರುವಾರ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಬಳಿ ನಡೆದಿದೆ.
ಘಟನೆಯಲ್ಲಿ ಏಳು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ.
ಸವಲೂರು ಹಳ್ಳಿಯಿಂದ ಆಂಧ್ರಪ್ರದೇಶದ ದೇವಕೋಟಕ್ಕೆ ಕುಟುಂಬವೊಂದು ಟ್ರ್ಯಾಕ್ಟರ್ನಲ್ಲಿ ಪಯಣಿಸುತ್ತಿತ್ತು. ಈ ವೇಳೆ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್ ಒಂದು ಟ್ಯಾಕ್ಟರ್ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.