ತಿರುಪತಿ: ರಾಮಚಂದ್ರ ಮಂಡಲ್ನಲ್ಲಿರುವ 500 ವರ್ಷಗಳಷ್ಟು ಹಳೆಯದಾದ ರಾಯಲಚೆರುವು ಹೆಸರಿನ ಬೃಹತ್ ನೀರಿನ ಸಂಗ್ರಹಾಗಾರದ ಬದುವಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಮೀಪದ 16 ಗ್ರಾಮಗಳ ಜನರಿಗೆ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಚಿತ್ತೂರು ಜಿಲ್ಲಾಡಳಿತ ಭಾನುವಾರ ಸಂಜೆ ಸೂಚನೆ ನೀಡಿದೆ.
ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಸಂಗ್ರಹಾಗಾರ ಭರ್ತಿಯಾಗಿದೆ. ಇದರಿಂದ ಕಾಣಿಸಿಕೊಂಡಿರುವ ಬಿರುಕುಗಳನ್ನು ಜಿಲ್ಲಾಡಳಿತ ಮುಚ್ಚುತ್ತಿದೆ.