ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗುರ್ಜಾರ್ ಮುಸ್ಲಿಂ ಸಮುದಾಯದ ಗುಲಾಂ ಅಲಿ ಅವರನ್ನು ರಾಜ್ಯಸಭೆಗೆ ಶನಿವಾರ ನಾಮನಿರ್ದೇಶನ ಮಾಡಲಾಗಿದೆ.
ಮೊದಲ ಬಾರಿಗೆ ಈ ಪ್ರದೇಶದಿಂದ ಗುರ್ಜಾರ್ ಮುಸ್ಲಿಮರನ್ನು ಕೇಂದ್ರ ಸರ್ಕಾರ ಮೇಲ್ಮನೆಗೆ ನಾಮನಿರ್ದೇಶನ ಮಾಡಿದೆ.370ನೇ ವಿಧಿ ರದ್ದುಗೊಳಿಸಿದ ಬಳಿಕ ಈ ಕ್ರಮ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಶಾಸನ ಸಭೆಗಳಲ್ಲಿ ಸಮುದಾಯವು ಕಡಿಮೆ ಪ್ರಾತಿನಿಧ್ಯ ಹೊಂದಿದೆ.