ನವದೆಹಲಿ: ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈಶಾನ್ಯ ದೆಹಲಿಯ ಖಾಜುರಿ ಖಾಸ್ ಎಂಬ ಪ್ರದೇಶದ ಸಲ್ಮಾನ್ (22) ಎಂಬ ಯವುಕನೇ ಬಂಧಿತ.
ಪೊಲೀಸರು ಸಲ್ನಾನ್ನನ್ನುವಿಚಾರಣೆ ನಡೆಸಿದಾಗ, ‘ತನಗೆ ಜೈಲಿನಲ್ಲಿ ಇರುಬೇಕು ಎನಿಸಿದೆ. ಹಾಗಾಗಿ ಈ ಕೆಲಸ ಮಾಡಿದ್ದೇನೆ‘ ಎಂದುಹೇಳಿದ್ದಾನೆ.
ಆರೋಪಿಯು ಡ್ರಗ್ಸ್ ವ್ಯಸನಿಯಾಗಿದ್ದು, ಈ ಹಿಂದೆ 2018 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಆತನನ್ನು ಬಾಲಾಪರಾಧಿಗಳ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾದ ನಂತರವೂ ಮತ್ತೆ ಡ್ರಗ್ಸ್ ವ್ಯಸನಕ್ಕೆ ಬಿದ್ದು ಹುಚ್ಚಾಟ ನಡೆಸಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.