ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವುದರ ಬಗ್ಗೆ, ಉತ್ತರ ಪ್ರದೇಶದಲ್ಲಿ ‘ಅಸ್ಲಿ ಆ ರಹಾ ಹೈ, ನಕಲಿ ಸೆ ಸಾವಧಾನ್’(ಅಸಲಿ ಬರುತ್ತಿದೆ, ನಕಲಿ ಬಗ್ಗೆ ಎಚ್ಚರದಿಂದಿರಿ) ಎಂಬ ಪೋಸ್ಟರ್ ಅಭಿಯಾನ ಶಿವಸೇನಾದಿಂದ ನಡೆಯುತ್ತಿದೆ. ವಾಸ್ತವದಲ್ಲಿ, ಉದ್ಧವ್ ಸಂಬಂಧಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಜೂನ್ 5ರಂದು ಅಯೋಧ್ಯೆಗೆ ನೀಡಲಿರುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಈ ಅಭಿಯಾನ ನಡೆಯುತ್ತಿದೆ.