ನ.27ರಂದು ಅಧಿಸೂಚನೆ ಮುಖಾಂತರ ಕಾನೂನುಬಾಹಿರ ಮತಾಂತರ ತಡೆ ಸುಗ್ರೀವಾಜ್ಞೆ 2020 ಅನ್ನು ಜಾರಿಗೊಳಿಸಲಾಗಿತ್ತು. ಇದನ್ನು ಉಲ್ಲಂಘಿಸಿದವರ ವಿರುದ್ಧ ಇಲ್ಲಿಯವರೆಗೂ ಸುಮಾರ 12 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಇಟಾದಲ್ಲಿ ಎಂಟು ಜನರನ್ನು, ಸೀತಾಪುರದಲ್ಲಿ ಏಳು, ಗ್ರೇಟರ್ ನೊಯ್ಡಾದಲ್ಲಿ ನಾಲ್ವರು, ಶಹಜಹಾನ್ಪುರ, ಅಜಂಗಡದಲ್ಲಿ ತಲಾ ಮೂವರು, ಮೊರದಾಬಾದ್, ಮುಜಾಫ್ಫರನಗರ, ಬಿಜ್ನೊರ್, ಕನೌಜ್ನಲ್ಲಿ ತಲಾ ಇಬ್ಬರು ಹಾಗೂ ಬರೇಲಿ, ಹರ್ದೊಯಿಯಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಸೂಚನೆ ಪ್ರಕಟವಾದ ಮರುದಿನವೇ ಬರೇಲಿಯಲ್ಲಿ ಮೊದಲ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.