ತಿರುವನಂತಪುರ (ಪಿಟಿಐ): ರಾಜತಾಂತ್ರಿಕ ಮಾರ್ಗ ಬಳಸಿಕೊಂಡು ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು, ಪ್ರಕರಣಕ್ಕೆ ಸಂಬಂಧಿಸಿಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಕುಟುಂಬ ಅಥವಾ ಎಲ್ಡಿಎಫ್ ಶಾಸಕ ಕೆ.ಟಿ. ಜಲೀಲ್ ಅವರ ಹೆಸರು ಹೇಳುವುದನ್ನು ಮುಂದುವರಿಸಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆಯ ಕರೆ ಜುಲೈ 2ರ ಬೆಳಿಗ್ಗೆಯಿಂದ ಬರುತ್ತಿವೆ ಎಂದು ಭಾನುವಾರ ಆರೋಪಿಸಿದ್ದಾರೆ.