ಉತ್ತರ ಪ್ರದೇಶದ ರೈತರು ಆಡಳಿತಾರೂಢ ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವುದನ್ನು ಗಡ್ಕರಿ ಅಲ್ಲಗಳೆದರು. ‘ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿವೆ. ಅನ್ನದಾತ ಈಗ ಶಕ್ತಿದಾತನಾಗಿದ್ದಾನೆ.ಹೆಚ್ಚುವರಿಯಾಗಿ ಉಳಿಯುವ ಕಬ್ಬು, ಜೋಳ, ಭತ್ತ ಮತ್ತು ಗೋದಿಯನ್ನು ಜೈವಿಕ ಎಥೆನಾಲ್ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಹೆಚ್ಚಾಗಿದೆ’ ಎಂದು ಅವರು ಹೇಳಿದರು.