ಏಪ್ರಿಲ್ 27ರಂದು ಬದರೀನಾಥ ಯಾತ್ರೆಯು ಪ್ರಾರಂಭವಾಗಲಿದೆ. ಚಳಿಗಾಲದ ವಿರಾಮದ ನಂತರ ಚಾರ್ಧಾಮ್ ಸರ್ಕ್ಯೂಟ್ನಲ್ಲಿರುವ ಹಿಮಾಲಯ ಶ್ರೇಣಿಯ ನಾಲ್ಕು ದೇವಾಲಯಗಳನ್ನು ತೆರೆಯುವುದಾಗಿ ಉತ್ತರಾಖಂಡ ಸರ್ಕಾರವು ಈಗಾಗಲೇ ಘೋಷಿಸಿದೆ. ಕೇದಾರನಾಥ ಪೋರ್ಟಲ್ ಏಪ್ರಿಲ್ 25ರಂದು, ಗಂಗೋತ್ರಿ ಹಾಗೂ ಯಮುನೋತ್ರಿ ಪೋರ್ಟಲ್ಗಳು ಏಪ್ರಿಲ್ 22ರಂದು ತೆರೆಯಲಿವೆ. ಈ ಯಾತ್ರೆಗೆ ಫೆ. 21ರಿಂದಲೇ ಆನ್ಲೈನ್ ನೋಂದಣಿ ಆರಂಭವಾಗಲಿದೆ.