ಸಭೆಯು ಆರಂಭವಾದಂತೆ ಪೂರ್ವ ನಿರ್ಧರಿತ ನಿರ್ಣಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಆಗ, ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿರಿಯ ಮುಖಂಡ ಸಿ.ವಿ.ಷಣ್ಮುಗಂ ಅವರು, ‘ಪಕ್ಷಕ್ಕೆ ಏಕ ನಾಯಕತ್ವ ಬೇಕಾಗಿದೆ’ ಎಂದು ಪ್ರತಿಪಾದಿಸಿದರು. ಉಪ ಕಾರ್ಯದರ್ಶಿ ಕೆ.ಪಿ.ಮುನುಸ್ವಾಮಿ ಎಲ್ಲ ನಿರ್ಣಯಗಳನ್ನು ಸಭೆಯು ತಿರಸ್ಕರಿಸಿದೆ ಎಂದು ಘೋಷಿಸಿದರು.