ಲೋಕಸಭೆ ಸೆಕ್ರೆಟರಿಯೆಟ್ನ ಜಂಟಿ ಕಾರ್ಯದರ್ಶಿ ವೈ.ಎಂ.ಕಂದಪಾಲ್ ಅವರಿಗೆ ಇತ್ತೀಚೆಗೆ ಪತ್ರ ಬರೆದಿರುವ ದೆಹಲಿ ಏಮ್ಸ್ನ ನಿರ್ದೇಶಕ ಎಂ.ಶ್ರೀನಿವಾಸ್ ಅವರುಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ (ಒಪಿಡಿ) ಭೇಟಿ ನೀಡುವ, ತುರ್ತು ಚಿಕಿತ್ಸೆ ಪಡೆಯುವ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಸದರಿಗಾಗಿ ಸಿದ್ಧಪಡಿಸಲಾಗಿರುವ ಎಸ್ಒಪಿ ಕುರಿತು ಮಾಹಿತಿ ನೀಡಿದ್ದಾರೆ. ಸಂಸದರೊಂದಿಗೆ ಸಮನ್ವಯ ಸಾಧಿಸುವುದಕ್ಕಾಗಿ ನೋಡೆಲ್ ಅಧಿಕಾರಿಯೊಬ್ಬರನ್ನು ನೇಮಿಸಿರುವ ವಿಷಯವನ್ನೂ ಅದರಲ್ಲಿ ಪ್ರಸ್ತಾಪಿಸಿದ್ದಾರೆ.