ಶ್ರೀನಗರ: ಕಣಿವೆ ರಾಜ್ಯದಲ್ಲಿ ಹಿಮಪಾತದ ಪರಿಣಾಮ ನಾಲ್ಕು ದಿನಗಳಿಂದ ಸ್ಥಗಿತವಾಗಿದ್ದ ವಿಮಾನ ಸೇವೆಯು ಗುರುವಾರ ಪುನರಾರಂಭವಾಗಿದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಮೊದಲ ವಿಮಾನ ಆಗಮಿಸಿತು.
ಹಿಮಪಾತದಿಂದಾಗಿ ಶ್ರೀನಗರ ವಿಮಾನ ನಿಲ್ದಾನ ಮತ್ತು ದೇಶದ ಇತರೆ ವಿಮಾನ ನಿಲ್ದಾಣಗಳ ನಡುವೆ ಭಾನುವಾರದಿಂದ ಸಂಪರ್ಕ ಕಡಿದುಹೋಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.