ಬಳಿಕ, ನಯಾ ಘಾಟ್ನಲ್ಲಿ ಚುನಾವಣಾ ಸಭೆ ನಡೆಸಿದ ಅವರು, ‘ಜನರು ಬಿಜೆಪಿಯನ್ನು ತಿರಸ್ಕರಿಸಿ, ದೇಶ ಮತ್ತು ರಾಜ್ಯದ ಸಂಯುಕ್ತ ಸಂಸ್ಕೃತಿಯನ್ನು ಕಾಪಾಡುತ್ತಾರೆ ಎಂಬ ಭರವಸೆ ಇದೆ. ಈ ಚುನಾವಣೆ ಬಳಿಕ ಎಸ್ಪಿ ಸರ್ಕಾರ ರಚಿಸಿದರೆ ಮುಂದಿನ ಐದು ವರ್ಷಗಳಲ್ಲಿ ಅಯೋಧ್ಯೆಯನ್ನು ಪ್ರಮುಖ ಧಾರ್ಮಿಕ ಸ್ಥಳವನ್ನಾಗಿ ಮಾರ್ಪಾಡು ಮಾಡಲಾಗುವುದು’ ಎಂದು ಭರವಸೆ ನೀಡಿದರು. ಜೊತೆಗೆ, 2015ರಲ್ಲಿ ಅಯೋಧ್ಯೆಯಲ್ಲಿ ‘ಭಜನಾ ಸ್ಥಳ’ವನ್ನು ತಮ್ಮ ಸರ್ಕಾರವೇ ನಿರ್ಮಿಸಿದ್ದು ಎಂದು ಜನರಿಗೆ ನೆನಪಿಸಿದರು.