‘ಪ್ರತಿಯೊಬ್ಬರು ಉಚಿತ ಕೊಡುಗೆಗಳು ಬೇಕು ಎನ್ನುತ್ತಾರೆ. ಇದೇ ಕಾರಣಕ್ಕಾಗಿಯೇ, ಈ ವಿಷಯದ ಮೇಲೆ ವ್ಯಾಪಕ ಚರ್ಚೆ ನಡೆಯಲಿ ಎಂಬ ಪ್ರಯತ್ನ ಮಾಡಲಾಯಿತು. ಯಾವುದು ಉಚಿತ ಕೊಡುಗೆ, ಯಾವುದು ಕಲ್ಯಾಣ ಕಾರ್ಯಕ್ರಮ ಎಂಬುದನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸಲು ಕೋರ್ಟ್ ಮುಂದಾಯಿತು. ಆ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳುವ ಪ್ರಯತ್ನ ನಮ್ಮದು’ ಎಂದು ನ್ಯಾಯಪೀಠ ಹೇಳಿತು.