‘ಜೈರಾಮ್ ಉಸೇಂದಿ(35) ಎಂಬವರನ್ನು ಟೆಕಾನರ್ ಗ್ರಾಮದಲ್ಲಿ ಶುಕ್ರವಾರ ಹತ್ಯೆಗೈಯಲಾಗಿದೆ. ಆತ ತನ್ನ ಸಹೋದರನೊಂದಿಗೆ ಸ್ಥಳೀಯ ಮಾರುಕಟ್ಟೆಗೆ ಹೋದ ವೇಳೆ ಈ ಘಟನೆ ನಡೆದಿದೆ. ನಕ್ಸಲರು ಜೈರಾಮ್ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ಬಳಿಕ ಚೂಪಾದ ಶಸ್ತ್ರದಿಂದ ಆತನನ್ನು ಹತ್ಯೆಗೈದಿದ್ದಾರೆ. ಈ ವೇಳೆ ಜೈರಾಮ್ನೊಂದಿಗಿದ್ದ ಸಹೋದರ, ನಕ್ಸಲರಿಂದ ತಪ್ಪಿಸಿಕೊಂಡಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದರು.