ರಾಜ್ಯದ ಪರ್ವತ ಪ್ರದೇಶಗಳಲ್ಲಿ ರಾಡಾರ್ಗಳನ್ನು ಸ್ಥಾಪಿಸುವುದು, ಯುದ್ಧವಿಮಾನಗಳನ್ನು ಇಳಿಸಲು ಅತ್ಯಾಧುನಿಕ ನಿಲ್ದಾಣ ನಿರ್ಮಾಣಕ್ಕೆ ವಾಯುಪಡೆ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಚಮೋಲಿ, ಪಿತೋರ್ಗಡ, ಉತ್ತರಕಾಶಿ ಜಿಲ್ಲೆಗಳ ಪರ್ವತ ಪ್ರದೇಶಗಳಲ್ಲಿ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ.