ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪುನರ್‌ರಚಿಸುವ ಪ್ರಯತ್ನ: ಡಿ.ರಾಜಾ

Last Updated 28 ಜನವರಿ 2023, 16:48 IST
ಅಕ್ಷರ ಗಾತ್ರ

ನವದೆಹಲಿ: ಮೊಘಲ್‌ ಗಾರ್ಡನ್‌ ಮರುನಾಮಕರಣ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸಿವೆ.

‘ಭಾರತದ ಇತಿಹಾಸವನ್ನು ಪುನರ್‌ ರಚಿಸುವುದು ಹಾಗೂ ರಾಷ್ಟ್ರೀಯತೆಯನ್ನು ಪುನರ್‌ ವ್ಯಾಖ್ಯಾನಿಸುವುದು ಆರ್‌ಎಸ್‌ಎಸ್‌ ಸಿದ್ಧಾಂತ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ದೇವಪ್ರಭುತ್ವದ ದೇಶವಲ್ಲ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಟೀಕಿಸಿದ್ದಾರೆ.

‘ಮುಂದೊಂದು ದಿನ ಕೋಲ್ಕತ್ತದ ಈಡನ್ ಗಾರ್ಡನ್ಸ್‌ಗೆ ಮೋದಿ ಗಾರ್ಡನ್ಸ್‌ ಎಂದು ಮರುನಾಮಕರಣ ಮಾಡಬಹುದು. ಬಿಜೆಪಿಯವರು ಹೆಸರು ಬದಲಾವಣೆ ಕಾರ್ಯವನ್ನು ಕೈಬಿಟ್ಟು ಉದ್ಯೋಗ ಸೃಷ್ಟಿಯತ್ತ ಚಿತ್ತ ಹರಿಸಲಿ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಿಯಾನ್‌ ಹೇಳಿದ್ದಾರೆ.

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಮತ್ತು ಕಿರಣ್‌ ರಿಜಿಜು ಅವರು ಮರುನಾಮಕರಣದ ನಿಲುವನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT