‘ನಿರಂತರವಾಗಿ ವಿವಿಧ ಹಂತಗಳಲ್ಲಿ ಒತ್ತಡ ಹೇರಿದ ನಂತರವೂ ಹಿಂದಿನ ನಿರ್ಣಯ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.ಈ ಮಧ್ಯೆ, ಸದಸ್ಯರಲ್ಲಿ ತಮ್ಮ ಅಧಿಕಾರವಧಿ ಕುರಿತು ಗೊಂದಲ ಇತ್ತು. ಇದನ್ನು ಬಗೆಹರಿಸಲು ಈಗ ಮೇಲ್ಮನೆಯ ಅಸ್ತಿತ್ವ ಮುಂದುವರಿಸಲು ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಸಚಿವ ಬುಗ್ಗಣ ರಾಜೇಂದ್ರನಾಥ್ ವಿವರಿಸಿದರು.