ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಗಣೇಶ ವಿಸರ್ಜನೆ ವೇಳೆ ಕೊಚ್ಚಿಹೋಗಿದ್ದ ಮತ್ತೊಂದು ಮೃತದೇಹ ಪತ್ತೆ

Last Updated 21 ಸೆಪ್ಟೆಂಬರ್ 2021, 4:56 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ವರ್ಸೋವ ಜೆಟ್ಟಿಯ ಅರಬ್ಬಿ ಸಮುದ್ರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಸಾವಿಗೀಡಾಗಿದ್ದ ಯುವಕನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಘಟನೆ ನಡೆದ 32 ಗಂಟೆಗಳ ಬಳಿಕ ವಿಜಯ್‌ ಪಾಟೀಲ್‌ ಎಂಬುವರ ಮೃತದೇಹ ಪತ್ತೆಯಾಗಿದೆ.

ಸೋಮವಾರ ಪಾಟೀಲ್‌ ಅವರ ಜತೆ ಇತರ ಇಬ್ಬರು ಯುವಕರೂ ನೀರಿನಲ್ಲಿ ಮುಳಗಿ ಅಸುನೀಗಿದ್ದರು. ಇವರ ಮೃತದೇಹಗಳನ್ನು ಆಗಲೇ ಪತ್ತೆ ಮಾಡಲಾಗಿತ್ತು.

ಒಟ್ಟು ಐವರು ಯುವಕರು ವಿಗ್ರಹ ವಿಸರ್ಜನೆಗಾಗಿ ನೀರಿಗಿಳಿದಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT