ಅಮರಾವತಿ: ರಾಜ್ಯದಲ್ಲಿ ಮೂರು ಹೊಸ ರಾಜಧಾನಿಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಎರಡು ಹೊಸ ಕಾನೂನುಗಳ ಬಗ್ಗೆ ಅ. 5ರವರೆಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಆಂಧ್ರ ಪ್ರದೇಶ ಹೈಕೋರ್ಟ್ ಸೋಮವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿಗಳಾದ ಎ.ವಿ. ಶೇಷಸಾಯಿ, ಎಂ. ಸತ್ಯನಾರಾಯಣ ಮೂರ್ತಿ ಅವರನ್ನೊಳಗೊಂಡ ಪೀಠವು, ರೈತರ ಹಿತರಕ್ಷಣಾ ಸಮಿತಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು.
ರಾಜಧಾನಿಗಳ ರಚನೆಯ ಕುರಿತು ಯಥಾಸ್ಥಿತಿಯನ್ನು ಮುಂದುವರಿಸಬೇಕೆಂದು ಹೇಳಿದ ಕೋರ್ಟ್, ಅ. 5ಕ್ಕೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.