ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾವೃತ ಪ್ರದೇಶದಿಂದ ಗರ್ಭಿಣಿಯನ್ನು ರಕ್ಷಿಸಿದ ಸೇನೆ

Last Updated 9 ಫೆಬ್ರುವರಿ 2023, 15:39 IST
ಅಕ್ಷರ ಗಾತ್ರ

ಜಮ್ಮು : ಹಿಮಪಾತದಿಂದ ಆವೃತವಾಗಿರುವ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾಡಾ ಜಿಲ್ಲೆಯ ಕುಗ್ರಾಮ ನವಾಪಾಚಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಭೂ ಹಾಗೂ ವಾಯುಸೇನೆಯ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

‘ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಇದರಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾಮದಿಂದ ಸೇನೆಗೆ ಕರೆ ಬರುತ್ತದೆ. ಈ ವೇಳೆ ಎಂಐ ಹೆಲಿಕಾಪ್ಟರ್‌ ಮೂಲಕ ವಾಯುಸೇನೆಯ ತಂಡವೊಂದು ಹಿಮಾವೃತ ನವಾಪಾಚಿ ಗ್ರಾಮಕ್ಕೆ ಹೋಗಿ, ಗರ್ಭಿಣಿಯನ್ನು ಕಿಶ್ತ್‌ವಾಡಾ ನಗರಕ್ಕೆ ಕರೆತಂದಿತು’ ಎಂದು ಸೇನಾ ವಕ್ತಾರ ಲೆ.ಕರ್ನಲ್‌ ದೇವೇಂದ್ರ ಆನಂದ್‌ ಅವರು ಮಾಹಿತಿ ನೀಡಿದರು.

ನವಾಪಾಚಿ ಗ್ರಾಮಸ್ಥರು ಭೂ ಹಾಗೂ ವಾಯುಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸೇನೆಯ ಕುರಿತು ಜಯಘೋಷಗಳನ್ನು ಕೂಗಿದ್ದಾರೆ. ‘ಭಯೋತ್ಪಾದನೆ ನಿಗ್ರಹ ಕಾರ್ಯಚರಣೆಯಲ್ಲಿ ಮಾತ್ರ ಸೇನೆ ತೊಡಗುವುದಿಲ್ಲ. ಜನರ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತದೆ’ ಎಂದು ಲೆ.ಕರ್ನಲ್‌ ದೇವೇಂದ್ರ ಆನಂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT