‘ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಇದರಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾಮದಿಂದ ಸೇನೆಗೆ ಕರೆ ಬರುತ್ತದೆ. ಈ ವೇಳೆ ಎಂಐ ಹೆಲಿಕಾಪ್ಟರ್ ಮೂಲಕ ವಾಯುಸೇನೆಯ ತಂಡವೊಂದು ಹಿಮಾವೃತ ನವಾಪಾಚಿ ಗ್ರಾಮಕ್ಕೆ ಹೋಗಿ, ಗರ್ಭಿಣಿಯನ್ನು ಕಿಶ್ತ್ವಾಡಾ ನಗರಕ್ಕೆ ಕರೆತಂದಿತು’ ಎಂದು ಸೇನಾ ವಕ್ತಾರ ಲೆ.ಕರ್ನಲ್ ದೇವೇಂದ್ರ ಆನಂದ್ ಅವರು ಮಾಹಿತಿ ನೀಡಿದರು.