ಚಂದ್ರು ಅವರು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸೇನೆಯ ಕ್ಯಾಂಟೀನ್ ಮತ್ತು ಮಳಿಗೆಗಳಿಗೆ ಪಡಿತರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ಪೂರೈಕೆದಾರರೊಂದಿಗೆ ಷಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದಾರೆ. ಕೋಲ್ಕತ್ತ ಮೂಲದ ರೋಚಕ್ ಆಗ್ರೋ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್ನ ಚೌಧರಿ ಅವರಿಗೆ ₹ 75 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಣವನ್ನು ಚೆಕ್ ಇಲ್ಲವೇ ತನಿಷ್ಕ್ ಆಭರಣ ಮಳಿಗೆಯ ಗಿಫ್ಟ್ ವೋಚರ್ ರೂಪದಲ್ಲಿ ನೀಡಲು ಕೋರಿದ್ದರು ಎಂಬುದು ಸಿಬಿಐ ತನಿಖೆಯ ವೇಳೆ ಪತ್ತೆ ಹಚ್ಚಲಾಗಿದೆ.