ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುಕೋರನೊಬ್ಬನನ್ನು ಸೇನೆಯು ಹೊಡೆದುರುಳಿಸಿದೆ’ ಎಂದು ಪೊಲೀಸರು ಬುಧವಾರ ತಿಳಿಸಿದರು.
ಮಂಗಳವಾರ ರಾತ್ರಿ ಉರಿ ಸೆಕ್ಟರ್ನ ದುಲಂಜಾ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುಕೋರನನ್ನು ಹತ್ಯೆಗೈಯಲಾಗಿದೆ. ಈತನನ್ನು ಉರಿಯ ಕುಂಡಿಬಾರ್ಜಲಾ ಕಮಲಕೋಟೆ ನಿವಾಸಿ ಸರ್ಫಾಸ್ ಮಿರ್ ಎಂದು ಗುರುತಿಸಲಾಗಿದೆ.
‘ಘಟನಾ ಸ್ಥಳದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸೇರಿದ ಗುರುತಿನ ಚೀಟಿ ಮತ್ತು ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಹೇಳಿದರು.