ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ, ಅಸ್ಸಾಂ ಸರ್ಕಾರವು ಬೇರೆ ಕಂಪೆನಿಗಳ ಕಿಟ್ಗಳಿಗೆ ತಲಾ ₹ 600 ನೀಡಿ ಖರೀದಿಸುತ್ತಿತ್ತು. ಆದರೆ, ಕೋವಿಡ್ ತುರ್ತುಪರಿಸ್ಥಿತಿಯ ಲಾಭ ಪಡೆಯುವ ದೃಷ್ಟಿಯಿಂದ ಬಿಸ್ವ ಶರ್ಮಾ ಅವರು ತಮ್ಮ ಮಗ ಮತ್ತು ಹೆಂಡತಿಯ ಉದ್ಯಮ ಪಾಲುದಾರರ ಕಂಪೆನಿಗಳಿಗೆ ಪ್ರತಿ ಕಿಟ್ಗೆ ₹ 990 ನೀಡಿತುರ್ತಾಗಿ ಸರಬರಾಜು ಮಾಡುವಂತೆ ಆದೇಶಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.