ಡೆಹ್ರಾಡೂನ್ ವರದಿ: ಯಮಕೇಶ್ವರ ಶಾಸಕಿ ರಿತು ಖಂಡೂರಿ ಅವರಿಗೆ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಪಕ್ಷ ಟಿಕೆಟ್ ನಿರಾಕರಿಸಿರುವುದರ ಹಿಂದೆ ಒಳ್ಳೆಯ ಉದ್ದೇಶ ಇರಬಹುದು ಎಂದು ಪ್ರತಿಕ್ರಿಯಿಸಿರುವ ರಿತು, ಎಲ್ಲಕ್ಕಿಂತ ಪಕ್ಷವೇ ಪರಮೋಚ್ಚ ಎಂದಿದ್ದಾರೆ. ರಿತು ಅವರು ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಬಿ.ಸಿ. ಖಂಡೂರಿ ಅವರ ಪುತ್ರಿ.