ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ನಡ್ಡಾ, ‘ಸಮಾಜವಾದಿ ಪಕ್ಷದವರು ಅಧಿಕಾರದಲ್ಲಿದಾಗ ಭಯೋತ್ಪಾದಕರು ಮತ್ತು ಮಾಫಿಯಾಗಳಿಗೆ ರಕ್ಷಣೆ ನೀಡಿದ್ದರು. 2007ರಲ್ಲಿ ಗೋರಖ್ಪುರದ ಗೋಲ್ ಘರ್ನಲ್ಲಿ ಮೂರು ಬಾಂಬ್ ಸ್ಫೋಟಗಳು ನಡೆದಿದ್ದವು. ಆ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಬ್ಬರು ಶಂಕಿತರನ್ನು ಬಂಧಿಸಿತ್ತು. ಆಗಿನ ಸಿ.ಎಂ ಅಖಿಲೇಶ್ ಯಾದವ್ ಅವರು ಸ್ಫೋಟದ ಶಂಕಿತರ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಪ್ರಕರಣವನ್ನು ಹಿಂಪಡೆಯುತ್ತಿರುವುದಾಗಿಯೂ ಯಾದವ್ ಹೇಳಿಕೊಂಡರೂ ಅಲಹಾಬಾದ್ ಹೈಕೋರ್ಟ್ ಅದನ್ನು ನಿರಾಕರಿಸಿತ್ತು’ ಎಂದು ಹೇಳಿದ್ದಾರೆ.